ಸತ್ಯ ಮೂಡಿಗೆರೆ
ಮಾಲಿನಿ ಮಲ್ಯರವರು ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರ ಸಹಾಯಕರಾಗಿ ಅವರ ಅಂತಿಮ ದಿನದವರೆಗೂ ದುಡಿದಿದ್ದಾರೆ.
ಜೀವ ವಿಮಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಲಿನಿ ತಮ್ಮ ಉಳಿತಾಯ ಹಣದಲ್ಲಿ ಮೂರು ಮಹಡಿ ಕಟ್ಟಡ ನಿರ್ಮಿಸಿ ಕಾರಂತರ ಅನೇಕ ಪುಸ್ತಕ, ಉಪಯೋಗಿಸುತ್ತಿದ್ದ ವಸ್ತುಗಳು, ಅನೇಕ ಉಪಯುಕ್ತ ಲೇಖನಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.
ಅಂದೇ ಆಸ್ಪತ್ರೆಯಿಂದ ಬಂದಿದ್ದರೂ ಕಾರಂತಜ್ಜರ ಬಗ್ಗೆ ಮಾತನಾಡುವ ಉತ್ಸಾಹ ನೋಡಬೇಕು.
ಉಡುಪಿ ಬಳಿ ಕೋಟದಲ್ಲಿ ಇವರ ಸಂಗ್ರಹಾಲಯವಿದೆ. ಆಸಕ್ತರು ನೋಡಲೇ ಬೇಕಾದ ಜಾಗ.
0 ಪ್ರತಿಕ್ರಿಯೆಗಳು