ಕುಂಟಾಬಿಲ್ಲೆ ಪಟ
-ಸುಶ್ರುತ ದೊಡ್ಡೇರಿ
ಮೌನಗಾಳ

ಆ ಕ್ಯಾಲೆಂಡರನ್ನು ಮೊಳೆಯಿಂದ ಕಳಚಿ ಕೆಳಗಿಳಿಸಿ
ಸುರುಳಿ ಸುತ್ತಿ ರಬ್ಬರ್ ಬ್ಯಾಂಡ್ ಹಾಕಿ
ನಾಗಂದಿಗೆಯ ಮೇಲೆ ಬೀಸಾಡುವ ಮುನ್ನ
ಯಾಕೋ ಏನೋ ಅನ್ನಿಸಿ ಕೊಳವೆಯನ್ನು ಕಿವಿಗೆ ಹಿಡಿದರೆ
ನೂರಾರು ರಾಗಗಳ ಮಿಶ್ರ ಕಲರವ..
—
ಕುತೂಹಲ ಕೆರಳಿ ಸುರುಳಿಯನ್ನು ಬಿಚ್ಚಿ
ಒಂದೊಂದು ಪುಟದ ಒಂದೊಂದೆ ಮನೆಯ ದಿಟ್ಟಿಸಿದರೆ
—
ಕುಂಟಾಬಿಲ್ಲೆ ಆಟದಂತೆ ಈ ಮನೆಯಿಂದ ಮುಂದಿನ ಮನೆಗೆ
ಹಾರುತ್ತ ಹಾರುತ್ತ ನಡೆದ ನನ್ನ ಹೆಜ್ಜೆಯಚ್ಚು,
ಅದರಲ್ಲಿ ತುಂಬಿ ನಿಂತಿರುವ ಏನೇನೋ ಸದ್ದು:
—
ಬಿಡದೇ ನಕ್ಕ ದನಿ, ಸೆರೆಯುಬ್ಬಿ ಅತ್ತ ಬಿಕ್ಕು,
ಯಾರೋ ಬೈದ ಸದ್ದು, ನರಳಿದ ಮರ್ಮರ,
ಖುಶಿಯಲ್ಲಿ ಕಿರುಚಿದ ಪ್ರತಿಧ್ವನಿ, ಬಿಟ್ಟ ನಿಟ್ಟುಸಿರು..
—
ಬ್ಯಾಲೆನ್ಸ್ ಮಾಡುವುದರಲ್ಲೇ ದಿನ ಮುಗಿಯುತ್ತಿದ್ದ,
ದೆಸೆಯೇ ಗೊತ್ತಿಲ್ಲದೆ ಸುಮ್ಮನೆ ಮನೆಯಿಂದ ಮನೆಗೆ
ಹಾರುತ್ತ ನಡೆದಿದ್ದ ನನ್ನ ಒಂಟಿಹೆಜ್ಜೆ ಗುರುತುಗಳು
ತೀರ ಅಪೂರ್ಣ ಎನ್ನಿಸಿ, ಮತ್ತೊಮ್ಮೆ ಇದೇ ಮನೆಗಳಲ್ಲಿ
ನಡೆದು ಅಲ್ಲೇ ಉಳಿದ ಕನಸುಗಳ ನನಸಾಗಿಸಲೇ
ಅರ್ಧಕ್ಕೆ ಬಿಟ್ಟ ವ್ರತಗಳ ಪೂರ್ತಿ ಮಾಡಲೇ
ದಾಟಲಾಗದ ಮೈಲಿಗಲ್ಲುಗಳ ದಾಟಲೇ
ಪೂರೈಸದ ಕೆಲಸಗಳ ಕೈಂಕರ್ಯದಲ್ಲಿ ತೊಡಗಲೇ
ಎಂದು ಯೋಚಿಸುತ್ತಿದ್ದವನನ್ನು ನೋಡಿ
—
ಎರಡುಸಾವಿರದ ಹತ್ತರ ಕುಂಟಾಬಿಲ್ಲೆ ಪಟ
ಕೇಕೆ ಹಾಕಿ ನಕ್ಕು ಹೊಸ ಆಟಕ್ಕೆ ಕರೆಯಿತು.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ವೆರಿ ಟಚಿಂಗ್ ಟಚಿಂಗ್ ಕವನ….
tumbaa chennagide…..