ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಮೊನ್ನೆ ‘ಎಚ್ ಎಸ್ ವಿ ಅನಾತ್ಮ ಕಥನ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಬೇಕಾಗಿ ಬಂತು. ಎಚ್ ಎಸ್ ವೆಂಕಟೇಶ ಮೂರ್ತಿಯವರು ನನಗೇನು? ಎನ್ನುವ ಪ್ರಶ್ನೆಯೇ ನನ್ನ ಮುಂದಿರಲಿಲ್ಲ. ಏಕೆಂದರೆ ಎಚ್ ಎಸ್ ವಿ ಯನ್ನು ಓದುವುದು ಎಂದರೆ ಅದು ನನ್ನ ಯೌವ್ವನಕ್ಕೆ ಮರು ಭೇಟಿ ನೀಡಿದಂತೆ. ಎಚ್ ಎಸ್ ವಿ ರೂಪಿಸಿದ ಕಥೆ, ಕವಿತೆ, ಕಾದಂಬರಿಯನ್ನು ಹೀರಿಕೊಂಡೇ ನನ್ನ ಯೌವ್ವನ ಅರಳಿದ್ದು. ಹಾಗಾಗಿ ಎಚ್ ಎಸ್ ವಿ ಎಂದರೆ ನನ್ನ ಯೌವ್ವನ.

ಹಾಗೆ ಮಾತಾಡುತ್ತಿರುವಾಗಲೇ ನನಗೆ ಥಟ್ಟನೆ ಹೊಳೆದದ್ದು ‘ಔಟ್ ಲುಕ್’. ಈಗ 15 ವರ್ಷದ ಸಂಭ್ರಮದಲ್ಲಿರುವ, ದೇಶದ ಇಂಗ್ಲಿಷ್ ಮ್ಯಾಗಜಿನ್ ಜರ್ನಲಿಸಂಗೆ ಹೊಸ ಆಯಾಮ ಕೊಟ್ಟ, ಇಂಗ್ಲಿಷ್ ಮ್ಯಾಗಜಿನ್ ನ ವ್ಯಾಕರಣವನ್ನು ಮುರಿದು ಕಟ್ಟಿದ ‘ಔಟ್ ಲುಕ್’. ಔಟ್ ಲುಕ್ ನ ಅಸೋಸಿಯೇಟ್ ಎಡಿಟರ್, ಗೆಳೆಯ ಸುಗತ ಶ್ರೀನಿವಾಸರಾಜು ಬೆಂಗಳೂರಿನಲ್ಲಿ ಔಟ್ ಲುಕ್  ಹಮ್ಮಿಕೊಂಡಿದ್ದ ಸಂವಾದಕ್ಕೆ ಆಹ್ವಾನ ಕಳಿಸಿದಾಗ ನಾನು ನನ್ನ ಬೆರಳುಗಳನ್ನು ಎಣಿಸುತ್ತಾ ಹೋದೆ. ಹೇಗೆ ಒಂದು ಯೌವ್ವನ ನಮ್ಮಿಂದ ಗೊತ್ತಿಲ್ಲದೆ ಸರಿದುಹೋಗುತ್ತಿರುತ್ತದೆಯೋ ಹಾಗೆ ನಮಗೆ ಗೊತ್ತಿಲ್ಲದೇ ಔಟ್ ಲುಕ್ ಗೆ 15 ವರ್ಷ ಆಗಿಹೋಗಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

2 November, 2010

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

1 Comment

  1. shivaranjan satyampete

    sir,
    nimma hosa mediya mirchi cannagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading