ಮೊನ್ನೆ ರಂಗಾಯಣದ ‘ದುಂಡುಕಣ’ದಲ್ಲಿ ಕುಳಿತಿದ್ದೆ. ಪಕ್ಕ ಹಿಂದಿನ ದಿನ ರಾತ್ರಿಯೆಲ್ಲಾ ಯಕ್ಷಗಾನ ಆಟ ನೋಡಲು ನಿದ್ದೆಗೆಟ್ಟಿದ್ದ, ಈ ದಿನ ಇನ್ನೊಂದು ರಾತ್ರಿ ನಿದ್ದೆಗೆಡಲು ತಯಾರಾಗುತ್ತಿದ್ದ ಮಂಗಳೂರಿನ ದೇವು ಹನೇಹಳ್ಳಿ, ಹಿಂದೆ ತಿರುಗಿದರೆ ಚಾಮರಾಜನಗರದಲ್ಲಿ ಬ್ಯಾಂಕ್ ಆಫೀಸರ್ ಆಗಿದ್ದು ಇಡೀ ದಿನ ಅಂಕಿ ಸಂಖ್ಯೆಗಳ ಲೋಕದಲ್ಲಿ ಕಳೆದು ಹೋಗುವ ಗಿರಿಧರ ಕಾರ್ಕಳ, ಇನ್ನಷ್ಟು ಕತ್ತು ತಿರುಗಿಸಿದರೆ ತುಮಕೂರು, ಗುಲ್ಬರ್ಗ, ಶಿರಸಿ, ಶಿವಮೊಗ್ಗ… ಹೀಗೆ ಕರ್ನಾಟಕದ ಭೂಪಟವೇ ಅಲ್ಲಿ ಬಿಡಿಸಿಕೊಂಡಿತ್ತು.
ಗೆಳತಿ ಕೆ.ಸುಶೀಲಾ ಜೊತೆ ಫೋನ್ ನಲ್ಲಿ ಮಾತನಾಡುವಾಗ ಆಕೆ ಉತ್ಸಾಹದಿಂದ ಕೊಟ್ಟ ಪಟ್ಟಿ ನೋಡಿ ಇನ್ನಷ್ಟು ಸುಸ್ತಾದೆ. ದೇವನೂರು ಮಹಾದೇವ, ಹಂಪನಾ, ಜಿಎಚ್ ನಾಯಕ್, ಜಿ ರಾಮಕೃಷ್ಣ, ಕಿ ರಂ ನಾಗರಾಜ್, ಕೆ ವಿ ನಾರಾಯಣ್, ರಹಮತ್ ತರೀಕೆರೆ, ಕೆ ಮರುಳಸಿದ್ಧಪ್ಪ, ಜಿ ಕೆ ಗೋವಿಂದ ರಾವ್ , ಕ ವೆಂ ರಾಜಗೋಪಾಲ್, ವಿಜಯಮ್ಮ, ನಾಗಾಭರಣ, ಬಿ ಸುರೇಶ, ನಾ ದಾಮೋದರ ಶೆಟ್ಟಿ , ಕಡಿದಾಳು ಶಾಮಣ್ಣ, ಪ್ರಕಾಶ್ ಕಡಿದಾಳ್ , ರಾಜೇಶ್ವರಿ ತೇಜಸ್ವಿ, ಎನ್ ಪುಷ್ಪಮಾಲ, ಕಾಶೀನಾಥ ಅಂಬಲಗೆ.. ಹೀಗೆ ‘ಹೂ ಈಸ್ ಹೂ’ ಪಟ್ಟಿಯನ್ನೇ ಮುಂದಿಡುತ್ತಾ ಹೋದಳು. ಅಷ್ಟೇ ಅಲ್ಲ, ರಾಜಕಾರಣಿ ಮಹಿಮಾ ಪಟೇಲ್, ಮುರುಘಾ ಮಠದ ಸ್ವಾಮೀಜಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತಿತ್ತು.
ಪೂರ್ಣ ಓದಿಗೆ ಭೇಟಿ ಕೊಡಿ-ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು