ಕವಿತೆ
ನಾಗರಾಜ ಹರಪನಹಳ್ಳಿ
ಇಡೀ ಕಡಲನ್ನೇ
ಖರೀದಿಸಿದ್ದೇನೆ
ಜೊತೆಗೆ ಒಂದಿಷ್ಟು ಕಡಲ
ದಂಡೆಯನ್ನು
ಆದ್ರೆ ರಿಜಿಸ್ಟ್ರೇಶನ್
ಮಾಡಿಸಿಕೊಂಡಿಲ್ಲ
ಯಾಕೆಂದರೆ
ನಾನು ಇಲ್ಲವಾದಮೇಲೆ ಅವು ನನ್ನ
ಜನಕ್ಕೆ ಇರಲೆಂದು
ಇಡೀ ಬೆಳದಿಂಗಳನ್ನ
ಕೊಂಡುಕೊಂಡಿದ್ದೇನೆ
ಲಕ್ಷ ಲಕ್ಷ ನಕ್ಷತ್ರಗಳನ್ನ
ನನ್ನದಾಗಿಸಿಕೊಂಡಿದ್ದೇನೆ
ಒಂದಿಷ್ಟು ಬೆಳಕನ್ನು ಕಡ
ಪಡೆದಿದ್ದೇನೆ
ಹಾಗಂತ ಪಹಣಿ ಮೂಟೇಶೆನ್
ಎಂಟ್ರಿ ಯಾವುದು ಮಾಡಿಸಿಲ್ಲ
ಯಾಕೆಂದರೆ
ಬೆಳದಿಂಗಳನ್ನ ಗೋದ್ರೆಜ್
ಕಪಾಟನಲ್ಲಿ ಬಂಧಿಸಿಡಲು
ಆಗಲ್ಲ
ನನ್ನ ಸಾವಿನ ನಂತರ
ಬೆಳದಿಂಗಳನ್ನು ಕೊಂಡೊಯ್ಯಲು
ಆಗಲ್ಲ
ಅವು ನನ್ನವರಿಗೆ ಇರಲೆಂದು
ಬಿಟ್ಟು ಹೋಗುತ್ತೇನೆ
ಇಡೀ ಭೂಮಿಯನ್ನ
ಗೆದ್ದಿದ್ದೇನೆ
ಆದರಿಲ್ಲಿ ಅರಮನೆ ಕಟ್ಟಿಲ್ಲ
ಇರುವ ದಾರಿಗೆ ಹೆಸರು ಸಹ
ಇಟ್ಟಿಲ್ಲ
ನದಿ ಅರಣ್ಯ ನನ್ನ ಸರ
ಹದ್ದಿನಲ್ಲಿವೆ
ಹಾಗಂತ ಯಾವುದೇ ಬೇಲಿ
ಕಾಂಪೌಂಡು ಹಾಕಿಲ್ಲ
ಯಾಕೆಂದರೆ
ಕಾಲಾನಂತರ ಜೀವಜಾಲಕ್ಕೆ
ಎಲ್ಲವೂ ಇರಲೆಂದು
ಬಿಟ್ಟು ಹೋಗುತ್ತೇನೆ ………..





nice..sir
ತಟ್ಟಿದ ಕವಿತೆ….
mana muttida kavana..sir
UTKRUSHTA KAVITE….!
ಕಡಲು,ಬೆಳದಿಂಗಳು,ಭೂಮಿ..ಬಳಕೆಯ ಭಾವಗಳ ಅರ್ಥಪೂರ್ಣ ಕವಿತೆ.
ಉತ್ತಮ ಕವಿತೆ