ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹೆಣ್ಣು ಶಬ್ದ ಮಾಡದೆ ಉರಿಯಬೇಕೆಂಬುದು….’ – ಜ ನಾ ತೇಜಶ್ರೀ

ಹೀಗೊಂದು ಕವಿತೆ

 

ಜ ನಾ ತೇಜಶ್ರೀ

ಕುರುಡು ಮೆತ್ತಿಕೊಂಡ ಕಣ್ಣು

ಗಂಟೆಯನ್ನು ಹೆಣ್ಣು ಮುಟ್ಟಬಾರದು

ದೀಪ ಧೂಪ ಬೆಳಗಿ ಆರತಿ ಎತ್ತುವುದಷ್ಟೆ ಅವಳ ಕೆಲಸ:

ಹೆಣ್ಣು ಶಬ್ದ ಮಾಡದೆ ಉರಿಯಬೇಕೆಂಬುದು

ಶತಮಾನಗಳ ಹಳೆಯ ಅಲಿಖಿತ ಕಾನೂನು

.

ಬಿಟ್ಟಬಿಟ್ಟಂತೆ ಕುರುಡು ಮೆತ್ತಿಕೊಳ್ಳುವ

ಈ ಕಣ್ಣುಗಳನ್ನು ಕತ್ತಲಿನಿಂದ

ತಿಕ್ಕಿ ತೊಳೆಯದ ಹೊರತು

ಎಲ್ಲ ಬೆಳಕೂ ಕತ್ತಲೆಯೆ

.

ಶಬ್ದಕ್ಕೆ ಮೌನ, ಬೆಳಕಿಗೆ ಕತ್ತಲು,

ಅದಕ್ಕೇ ಗರ್ಭಗುಡಿಯೂ ದೇವರೂ ಸದಾ

ಮೌನ ಮತ್ತು ಕತ್ತಲು

 

‍ಲೇಖಕರು G

27 December, 2012

5 Comments

  1. Swarna

    nice lines

  2. shanthi k.a.

    sundara…..

  3. ಸುಧಾ ಚಿದಾನಂದಗೌಡ

    ಒಳ್ಳೆ ಕವಿತೆ ತೇಜಶ್ರೀ

  4. malathi S

    nija….chendada kavite..
    malathi S

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading