ನಾಗರಾಜ್ ಹರಪನಹಳ್ಳಿ. ಕಾರವಾರ
`ಯಾಕೆ ಗೊತ್ತಾ’
ನೀ ನಡೆದ ದಾರಿ
ಮೃದುವಾಗಿದೆ, ನಗುತಿದೆ
ಪರಿಮಳ ಹರಡಿದೆ
ಯಾಕೆ ಗೊತ್ತಾ
ನೀ ನಿಂತ ಕಡೆ
ನಿನ್ನ ತುಟಿಯಿಂದ ಹೊರಟ
ಶಬ್ದಗಳು ಪ್ರೀತಿಯ
ಬಿತ್ತಿವೆ
ಯಾಕೆ ಗೊತ್ತಾ
ನೀ ಮುಟ್ಟಿದ
ಕಡೆ ನದಿಗಳು ಹರಿದಿವೆ
ನಿನ್ನ ಅಂಗೈಯಲ್ಲಿ ನೀರು ಸೆಲೆಯಾಗಿ ಹರಿದಿದೆ
ಯಾಕೆ ಗೊತ್ತಾ
ನೀ ದಾರಿಯಲ್ಲಿ ನಡೆವಾಗ
ಹೂಗಳು ತಲೆಬಾಗುತ್ತವೆ
ನಿನ್ನಿಂದ ಬಣ್ಣ ಕಡ ಪಡೆದಿವೆ
ಯಾಕೆ ಗೊತ್ತಾ
ನೀ ಕುಳಿತು ಹರಟಿದೆ
ಚಿಟ್ಟೆಗಳು ಸಂಭ್ರಮಿಸಿದವು
ಯಾಕೆ ಗೊತ್ತಾ
ನೀ ಭೂಮಿಯ
ಮಗಳು
ನೀ ಕಾರುಣ್ಯದ
ಮುಗುಳು
ಚೆಲುವನ್ನೇ ಹೊದ್ದವಳು
****
ಕವಿತೆಯಂಥ ಹುಡುಗಿ
ಕವಿತೆಯಂಥ ಹುಡುಗಿ
ಕವಿತೆಯಾಗಲು ಇನ್ನೇನು
ಬೇಕು
ಬಣ್ಣದ ಕೋಣೆಯಲಿ
ನಿಂತವಳು
ಆಗಸಕೆ ಬಣ್ಣ ಎರಚಿದವಳು
ಹರಿವ ನೀರಿನಂಥ
ಹುಡುಗಿ
ನಗುವಲ್ಲಿ ನಗುಚೆಲ್ಲಿ
ಪಕ್ಕದವರ ಉಲ್ಲಾಸ ಗೊಳಿಸಿದವಳು ಕವಿತೆಯಂಥಾ
ಹುಡುಗಿ
ತುಟಿಗಳಲಿ ಹೂ ಅರಳಿಸಿದಳು
ಹುಬ್ಬುಗಳಲಿ
ಕಾಮನಬಿಲ್ಲು ಹೊದ್ದವಳು
ಶೃಂಗಾರವ ಹೊದ್ದ ಶೃಂಗದಂಥಾ
ಚೆಲುವೆ
ಕವಿತೆಯ ಎದೆಯ ಕದಗಳಲಿ
ಬಚ್ಚಿಟ್ಟು ಕೊಂಡವಳು
ಪ್ರೀತಿಯ ಬೆಳಕ ಕಣ್ಣಲಿ
ಚೆಲ್ಲಿಯೂ ಚೆಲ್ಲದಂತೆ
ಕಾಪಾಡಿ ಕೊಂಡವಳು
ಬಣ್ಣಗಳ ಮುಂಗುರುಳು
ಬೆರಳ ತುದಿಗಳಲಿ
ಇಟ್ಟು ನಾಟ್ಯವಾಡಿಸಿದ ಚೆಲುವೆ
ಸೊಗಸುಗಾರ್ತಿ
ಕವಿತೆಯಂಥ ಹುಡುಗಿ
ಕವಿತೆಯೇ ಆದವಳು.
ನೀನೇ ಬೇಕೆಂದಿಲ್ಲ ನನಗೆ
ನೀನೆಂಬ ನೆಪಸಾಕು ನಿನ್ನ ನೆನೆಯಲು
ನೀ ಬಿಟ್ಟುಹೋದ ನೆನಪುಗಳನ್ನು
ನಾ ಹೊರಲಾರದೆ ಮೂಟೆಯಲಿ ಕಟ್ಟಿಟ್ಟಿರುವೆ
ನೀ ಕೊಟ್ಟ ಕಹಿ ನೆನಪುಗಳಲ್ಲಾ
ನಿನ್ನ ಮುಂಗುರಳ ನೆನೆದೊಡೆ ಸಿಹಿಯಾದವು
ಕಣ್ಣು ಮುಚ್ಚಿದರೆ ಸಾಕು
ಕತ್ತಲೆಯ ಬದಲು ನಿನ್ನ ಮುದ್ದು ಮುಖವೇ ಕಾಣುವುದೆನಗೆ
ಎಂದೋ ಕೇಳಿದ ನಿನ್ನ ಧ್ವನಿಯೇ ಸಾಕು
ನಿನ್ನ ಕಳೆದುಹೋದ ನೆನಪುಗಳ ಹುಡುಕಲು
ಎಂದೋ ಅಸ್ಪಷ್ಟವಾಗಿ ನೋಡಿದ ನಿನ್ನ ಮುದ್ದು ಮಖವೇ ಸಾಕು
ನಿನ್ನ ಮರೆಯಾದ ನೆನಪುಗಳ ನೋಡಲು
ನಿನ್ನ ಜೊತೆ ಕಳೆದ ಕೆಲಸಮಯ ಸಾಕು
ನಿನ್ನ ಮರೆತ ನೆನಪುಗಳ ಕಲೆಹಾಕಲು
ನಿನ್ನ ಗಲ್ಲ ಮೇಲೆ ಗೀಚಿದ ನನ್ನ ಉಗುರುಗಳೇ ಸಾಕು
ನಿನ್ನ ಗುಳಿಬಿದ್ದ ಕೆಂಪುಗಲ್ಲ ನೆನೆಯಲು
ನಿನ್ನ ಹೆಸರು ಕೇಳಿದರೆ ಸಾಕು
ಸತ್ತುಹೋಹ ನೆನಪುಗಳಿಗೂ ಜೀವ ಬರುವುದು
ನಿನ್ನ ನೆನೆಯಬಾರದೆಂದುಕೊಳ್ಳುವೆ
ಆದರೆ ನೆಪವೇ ಬೇಡದಂತೆ ನೆನಪಾಗುತ್ತೀ
ನೀನು ಕೊಟ್ಟುಹೋದ ಕೋಟಿ ಕನಸುಗಳಿವೆ
ನೀನು ಬಿಟ್ಟುಹೋದ ಸಾವಿರ ನೆನಪುಗಳಿವೆ
ನೆನಪುಗಳ ನೆನೆಯಲು ನಿನ್ನ ನೆಪ ಬೇಕಷ್ಟೆ….
-ಕೆ.ಕೆ
ಚಂದ ಕವಿತೆ
Kavithe , comment kavithe awesome!!
ಹುಡುಗಿಯರ ಉಬ್ಬು ಗಳಲ್ಲಿ ಕಾಮನಬಿಲ್ಲು, ಕಾಮೆಂಟಿಗರ ಬೆರಳತುದಿಯಲ್ಲೊಂದು ಪದ್ಯ