ಹುಬ್ಬುಗಳಲಿ ಕಾಮನಬಿಲ್ಲು ಹೊದ್ದವಳು..

nagaraja harapanahalli

ನಾಗರಾಜ್ ಹರಪನಹಳ್ಳಿ. ಕಾರವಾರ

`ಯಾಕೆ ಗೊತ್ತಾ’

ನೀ ನಡೆದ ದಾರಿ
ಮೃದುವಾಗಿದೆ, ನಗುತಿದೆ
ಪರಿಮಳ ಹರಡಿದೆ
ಯಾಕೆ ಗೊತ್ತಾ

she with a birdನೀ ನಿಂತ ಕಡೆ
ನಿನ್ನ ತುಟಿಯಿಂದ ಹೊರಟ
ಶಬ್ದಗಳು ಪ್ರೀತಿಯ
ಬಿತ್ತಿವೆ
ಯಾಕೆ ಗೊತ್ತಾ

ನೀ ಮುಟ್ಟಿದ
ಕಡೆ ನದಿಗಳು ಹರಿದಿವೆ
ನಿನ್ನ ಅಂಗೈಯಲ್ಲಿ ನೀರು ಸೆಲೆಯಾಗಿ ಹರಿದಿದೆ
ಯಾಕೆ ಗೊತ್ತಾ

ನೀ ದಾರಿಯಲ್ಲಿ ನಡೆವಾಗ
ಹೂಗಳು ತಲೆಬಾಗುತ್ತವೆ
ನಿನ್ನಿಂದ ಬಣ್ಣ ಕಡ ಪಡೆದಿವೆ
ಯಾಕೆ ಗೊತ್ತಾ

ನೀ ಕುಳಿತು ಹರಟಿದೆ
ಚಿಟ್ಟೆಗಳು ಸಂಭ್ರಮಿಸಿದವು
ಯಾಕೆ ಗೊತ್ತಾ

ನೀ ಭೂಮಿಯ
ಮಗಳು
ನೀ ಕಾರುಣ್ಯದ
ಮುಗುಳು
ಚೆಲುವನ್ನೇ ಹೊದ್ದವಳು
****

ಕವಿತೆಯಂಥ ಹುಡುಗಿ

ಕವಿತೆಯಂಥ ಹುಡುಗಿ
ಕವಿತೆಯಾಗಲು ಇನ್ನೇನು
ಬೇಕು
butter fliesಬಣ್ಣದ ಕೋಣೆಯಲಿ
ನಿಂತವಳು
ಆಗಸಕೆ ಬಣ್ಣ ಎರಚಿದವಳು
ಹರಿವ ನೀರಿನಂಥ
ಹುಡುಗಿ
ನಗುವಲ್ಲಿ ನಗುಚೆಲ್ಲಿ
ಪಕ್ಕದವರ ಉಲ್ಲಾಸ ಗೊಳಿಸಿದವಳು ಕವಿತೆಯಂಥಾ

ಹುಡುಗಿ
ತುಟಿಗಳಲಿ ಹೂ ಅರಳಿಸಿದಳು
ಹುಬ್ಬುಗಳಲಿ
ಕಾಮನಬಿಲ್ಲು ಹೊದ್ದವಳು
ಶೃಂಗಾರವ ಹೊದ್ದ ಶೃಂಗದಂಥಾ
ಚೆಲುವೆ
ಕವಿತೆಯ ಎದೆಯ ಕದಗಳಲಿ
ಬಚ್ಚಿಟ್ಟು ಕೊಂಡವಳು
ಪ್ರೀತಿಯ ಬೆಳಕ ಕಣ್ಣಲಿ
ಚೆಲ್ಲಿಯೂ ಚೆಲ್ಲದಂತೆ
ಕಾಪಾಡಿ ಕೊಂಡವಳು
ಬಣ್ಣಗಳ ಮುಂಗುರುಳು
ಬೆರಳ ತುದಿಗಳಲಿ
ಇಟ್ಟು ನಾಟ್ಯವಾಡಿಸಿದ ಚೆಲುವೆ
ಸೊಗಸುಗಾರ್ತಿ
ಕವಿತೆಯಂಥ ಹುಡುಗಿ
ಕವಿತೆಯೇ ಆದವಳು.

‍ಲೇಖಕರು Admin

June 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಕಿರಣ್ ಕಾಂಗೋಕರ್

    ನೀನೇ ಬೇಕೆಂದಿಲ್ಲ ನನಗೆ
    ನೀನೆಂಬ ನೆಪಸಾಕು ನಿನ್ನ ನೆನೆಯಲು

    ನೀ ಬಿಟ್ಟುಹೋದ ನೆನಪುಗಳನ್ನು
    ನಾ ಹೊರಲಾರದೆ ಮೂಟೆಯಲಿ ಕಟ್ಟಿಟ್ಟಿರುವೆ

    ನೀ ಕೊಟ್ಟ ಕಹಿ ನೆನಪುಗಳಲ್ಲಾ
    ನಿನ್ನ ಮುಂಗುರಳ ನೆನೆದೊಡೆ ಸಿಹಿಯಾದವು

    ಕಣ್ಣು ಮುಚ್ಚಿದರೆ ಸಾಕು
    ಕತ್ತಲೆಯ ಬದಲು ನಿನ್ನ ಮುದ್ದು ಮುಖವೇ ಕಾಣುವುದೆನಗೆ

    ಎಂದೋ ಕೇಳಿದ ನಿನ್ನ ಧ್ವನಿಯೇ ಸಾಕು
    ನಿನ್ನ ಕಳೆದುಹೋದ ನೆನಪುಗಳ ಹುಡುಕಲು

    ಎಂದೋ ಅಸ್ಪಷ್ಟವಾಗಿ ನೋಡಿದ ನಿನ್ನ ಮುದ್ದು ಮಖವೇ ಸಾಕು
    ನಿನ್ನ ಮರೆಯಾದ ನೆನಪುಗಳ ನೋಡಲು

    ನಿನ್ನ ಜೊತೆ ಕಳೆದ ಕೆಲಸಮಯ ಸಾಕು
    ನಿನ್ನ ಮರೆತ ನೆನಪುಗಳ ಕಲೆಹಾಕಲು

    ನಿನ್ನ ಗಲ್ಲ ಮೇಲೆ ಗೀಚಿದ ನನ್ನ ಉಗುರುಗಳೇ ಸಾಕು
    ನಿನ್ನ ಗುಳಿಬಿದ್ದ ಕೆಂಪುಗಲ್ಲ ನೆನೆಯಲು

    ನಿನ್ನ ಹೆಸರು ಕೇಳಿದರೆ ಸಾಕು
    ಸತ್ತುಹೋಹ ನೆನಪುಗಳಿಗೂ ಜೀವ ಬರುವುದು

    ನಿನ್ನ ನೆನೆಯಬಾರದೆಂದುಕೊಳ್ಳುವೆ
    ಆದರೆ ನೆಪವೇ ಬೇಡದಂತೆ ನೆನಪಾಗುತ್ತೀ

    ನೀನು ಕೊಟ್ಟುಹೋದ ಕೋಟಿ ಕನಸುಗಳಿವೆ
    ನೀನು ಬಿಟ್ಟುಹೋದ ಸಾವಿರ ನೆನಪುಗಳಿವೆ
    ನೆನಪುಗಳ ನೆನೆಯಲು ನಿನ್ನ ನೆಪ ಬೇಕಷ್ಟೆ….

    -ಕೆ.ಕೆ

    ಪ್ರತಿಕ್ರಿಯೆ
  2. ಕೈದಾಳ್ ಕೃಷ್ಣಮೂರ್ತಿ

    ಹುಡುಗಿಯರ ಉಬ್ಬು ಗಳಲ್ಲಿ ಕಾಮನಬಿಲ್ಲು, ಕಾಮೆಂಟಿಗರ ಬೆರಳತುದಿಯಲ್ಲೊಂದು ಪದ್ಯ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: