ಗೋಪಾಲ ವಾಜಪೇಯಿ
ನಮ್ಮಿಬ್ಬರ ಪಾಲಿಗೆ ಇಂದಿನ ಸಂಜೆ ‘ಅವಿಸ್ಮರಣೀಯ’ವೇ ಸೈ. ನಾನು ಹಾಗೂ ಗೆಳೆಯ ಶ್ರೀಪತಿ ಮಂಜನಬೈಲು ಇಬ್ಬರೂ ಕನ್ನಡ ರಂಗಭೂಮಿಯ ‘ಜೀವಂತ ವಿಶ್ವಕೋಶ’ವೇ ಆಗಿರುವ ಶತಾಯುಷಿ ನಾಡೋಜ ಡಾ. ಏಣಿಗಿ ಬಾಳಪ್ಪ ಅವರನ್ನು ಕಂಡು, ಸಾಕಷ್ಟು ಹೊತ್ತು ಅವರೊಂದಿಗಿದ್ದು, ಅವರ ನೆನಪಿನ ಬುತ್ತಿಯಿಂದ ಒಂದಷ್ಟು ತುತ್ತುಗಳನ್ನು ಉಣ್ಣುವ ಸದವಕಾಶವನ್ನು ಪಡೆದೆವು.
ನಿನ್ನೆ ಮೈಸೂರಲ್ಲಿ ಆರಂಭವಾದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗೆಂದು ಬಂದಿದ್ದ ಬಾಳಪ್ಪಜ್ಜ ಬೆಂಗಳೂರಿನ ಅವರ ಅಳಿಯನ ಮನೆಯಲ್ಲಿ ಒಂದೆರಡು ದಿನ ಇರುವರೆಂಬ ಸುದ್ದಿಯನ್ನು ಗೆಳೆಯ ಮಂಡ್ಯ ರಮೇಶ್ ತಿಳಿಸಿ ಉಪಕರಿಸಿದರು.
ಬಾಳಪ್ಪಜ್ಜನವರೊಂದಿಗೆ ಕಳೆದ ಸಮಯದ ಒಂದೊಂದು ಕ್ಷಣವೂ ರಂಗಭೂಮಿಯ ಗತ ದಿನಗಳ ದರ್ಶನ ಮಾಡಿಸಿತು.
0 ಪ್ರತಿಕ್ರಿಯೆಗಳು