‘ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ?’ ಎಂದು ಕೇಳಲು ಯಾರಿಗಾದರೂ ಅರ್ಹತೆ ಇದ್ದರೆ ಅದು ಗುರುರಾಜ್ ಸನಿಲ್ ಅವರಿಗೆ.
ಹಾವಿನಂತೆ ಸಾಹಿತ್ಯವೂ ಅವರನ್ನು ಕಂಡು ಬುಸುಗುಟ್ಟಿದೆ. ಆದರೂ ಹಾವು ಸಾಹಿತ್ಯ ಎರಡನ್ನೂ ಹಿಡಿದು ತಮ್ಮ ಬಗಲಿಗೆ ಹಾಕಿಕೊಂಡಿರುವ ಖ್ಯಾತ ಉರಗ ತಜ್ಞ ಸನಿಲ್ ಅವರೊಂದಿಗೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.
ಹಾವು ಹಿಡಿತೀರಂತೆ ?
ಹೌದು.
ಅದೇ ರೀತಿ ಸಾಹಿತ್ಯಾನೂ ಹಿಡಿದು ಬುಟ್ಟಿಯಲ್ಲಿ ಹಾಕಿಕೊಳ್ಳುತ್ತೀರಂತೆ ?
ಪ್ರಯತ್ನ ಮಾಡ್ತಾ ಇದ್ದೇನೆ.
ಹಾವು ಬೆಟರಾ ? ಮನಿಷ್ಯ ಬೆಟರಾ ?
ಎರಡೂ ಬೆಟರ್
ಹಾವು ಹುಚ್ಚು ಯಾವಾಗ ಕಚ್ಚಿತು ?
ಬಾಲ್ಯದಲ್ಲಿ.
ಹಾವಿನ ಅನುಭವದಲ್ಲಿ ಸೂಪರ್ ಅನಿಸಿದ ಘಟನೆ ಯಾವುದು ?
ಮೊದಲ ಬಾರಿ ಕಾಳಿಂಗ ಹಿಡಿದದ್ದು.
ಮುಂದೆ ಏನ್ ಮಾಡ್ತೀರಿ ?
ಹಾವು ಮತ್ತು ಪರಿಸರ ಸಂರಕ್ಷಣೆಯಲ್ಲಿ ಜೀವನ ಮುಂದುವರಿಸುತ್ತೇನೆ.
ಉರಗತಜ್ಞ ಸಾಹಿತಿ ಗುರುರಾಜ್ ಸನಿಲ್ ಉಡುಪಿ ಅವರ ಜೊತೆ ಅವಧಿ ನಡೆಸಿದ ಚುಟುಕಾದ ಸಂದರ್ಶನಕ್ಕೆ
ಫಟಾಫಟ್ ಉತ್ತರ ಓದಿದೆ. ಚೆನ್ನಾಗಿದೆ. ಅಭಿನಂದನೆಗಳು
ಚುಟುಕು ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ.