ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ

ಸರ್ವಾಧಿಕಾರಿ….

ಶೇಷಗಿರಿ ಜೋಡಿದಾರ್


ಕೊರೆಯುವ ಕ್ರೌರ್ಯ ಮಲಗಿಸುತ್ತದೆ ಶಾಶ್ವತವಾಗಿ.
ಹೆದರಿಕೆಯ ನಡುಕದಲಿ ನಗ್ನವಾಗುವ ಹಸಿರು,
ಚಳಿಯ,ಬಿಳಿಯ ಚಾದರಹೊದ್ದು ಮುಲುಗಿದ ನಿಟ್ಟುಸಿರು.
ನೀರಿಗೂ ಕ್ಷಮೆಇಲ್ಲ, ಗಾಳಿಗೂ ಸುಂಕ
ತಾಪ ಇಲ್ಲಿ ಅಪರೂಪದ, ದುಬಾರಿ ಸಗಟು
ಸಹಜ ಬಾಳೇ ಅಗಿದೆ ಒಂದು ಒಗಟು,
ಹೆಪ್ಪುಗಟ್ಟಿಸಿ, ರೂಪ ಬದಲಿಸಿ
ಹರಡಿ ಪದರವಾಗಿ ಮೆರೆಯುವ
ಮೆತ್ತನೆಯ ಅಟ್ಟಹಾಸ
ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ
ಅದರಮೇಲೆ ಬೆಟ್ಟ ಓಡಿಸುವ ಒರಸೆ,
ಸಾವಕಾಶದಲ್ಲಿ ತಿರುಗಿಸುತ್ತಾನೆ
ತನ್ನ ಚೂಪು ಮೀಸೆ, ಪ್ರತಿಧ್ವನಿಸುವ ಶಂಖನಾದಲಿ
ನೀರ್ಗಲ್ಲ ಗರ್ಭಪಾತದಲಿ ಹರಿಯುವ ಹಿಮಪಾತ
ನಿಶ್ಯಭ್ದ ಡಮರುಗಕೆ ಓಗೊಡದ ಕೈಲಾಸವಾಸಿ.
ಪ್ರಾಣಿಗಳ ಸುಳಿವಿರದು ಈತನ ಪಾಳಿಯಲ್ಲಿ.
ಪಾಪ! ಅವುಗಳಿಗಾದರೂ ಆಸರೆ ಎಲ್ಲಿ?
ಗಿಡಮರಗಳು ಸೆಣಸಿ, ಸುಸ್ತಾಗಿ ಕುಸಿಯುವ ಕಣ್ಣಾ ಮುಚ್ಚಾಲೆ ಆಟ
ಘಾಸಿತ ಅಂಗಾಂಗಳ ಶಶ್ರೂಷೆಯಲಿ ನಿರತ.
ಹಸಿರುಟ್ಟ ಅನ್ನಪೂರ್ಣೆಯೇ ಕಂಗಾಲು
ಕೈಲಾಸವಾಸಿ ಹರನ ಹರಿವಿನಲ್ಲಿ
ಮಾಯಾವಿ ಶಿವ ಹೊರಬಿಡುವ ಭಂಗಿಯ ಧೂಮ
ಶಿಖರಗಳಮೇಲೆ ನರ್ತಿಸುವ ತಾಂಡವ…..
 

‍ಲೇಖಕರು G

January 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸುಬ್ಬಣ್ಣ ಮತ್ತೀಹಳ್ಳಿ.

    ಕ್ರೂರ ವಾಸ್ತವದ ಎಲ್ಲ ಆಯಾಮಗಳನ್ನು ತೀವ್ರತೆಯ ತೆಕ್ಕೆಯಲ್ಲಿ ಹಿಡಿದಿಟ್ಟ ಒಂದು ಸುಂದರ ಕವಿತೆ. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: