ಸೌಮ್ಯಶ್ರೀ ಎ ಎಸ್ ಹೊಸ ಕವಿತೆ- ಒಲವಿನ ಗೂಡು!

ಸೌಮ್ಯಶ್ರೀ ಎ ಎಸ್

ನೀನು ಸುರಿಸಿದ ಒಲವ ಮಳೆಯಲ್ಲಿ
ಮಿಂದ ಮನಸು ನಿನದೇ ಕನವರಿಕೆಯಲ್ಲಿ
ಕಳೆದುಹೋಗಿರುವಾಗ ಹದವಾಗಿ ಪ್ರೀತಿಯಲ್ಲಿ
ಬೆಂದ ಇಟ್ಟಿಗೆಯ ಜತನವಾಗಿ ಜೋಡಿಸಿದ್ದೆ.

ಹಸಿ ಇಟ್ಟಿಗೆಗೆ ಬೆಂಕಿ ತಗುಲಿಸಿ
ಅರೆ ಕ್ಷಣ ಕದಲದೆ ಕನಲದೆ
ಹೆದರಿ ಎದುರು ಕೂತಿದ್ದೆ
ಬೆಂಕಿಯ ಬಿಸಿ ಮುಖಕ್ಕೆ ರಾಚುತ್ತಿತ್ತು!

ಒಮ್ಮೊಮ್ಮೆ ಕಣ್ಣಿಗೆ ಹೊಗೆ ತುಂಬಿಕೊಂಡು
ಉರಿ ತಾಳಲಾರದೆ ಎರಡು ಹಸ್ತಗಳು ಉಜ್ಜಿದಾಗ
ಮೈ ಮರೆತು ಅತ್ತಿಂದಿತ್ತ ಕಣ್ಣು ಹಾಯಿಸಿದರೆ
ನನ್ನ ಮನಸು ನನಗರಿವಿಲ್ಲದೆ
ಅರೆ ಬೆಂದ ಇಟ್ಟಿಗೆಯಂತಾಗಿ
ಬಿಡುವುದೋ!

ನಿನದೇ ಗುಂಗಿನಲ್ಲಿ ಮುಳುಗಿ
ಮೈ ಮನಸು ಮತ್ತಿನಲ್ಲಿ ಅಲೆವಾಗ
ಮೊಗದಲ್ಲಿ ಮಾಸದ ಮುಗುಳ್ನಗೆಯ
ಅರಳಿ ನಗುವಾಗ ಅದೆಲ್ಲಿ
ಕಣ್ಣುಗಳು ಅಳಿದುಳಿದ
ಬೆಂಕಿ ಸುರಿಸಿಬಿಡುವವೋ!

ಮಣ್ಣಿನ ಹಚ್ಚನ್ನು ಹದವಾಗಿ
ಮನದಲ್ಲಿ ಕೂರಿಸಿ
ಜತನವಾಗಿ ಉರಿ ತಗುಲಿಸಿ
ಹದವಾಗಿ ಬೇಯಿಸಿ
ಒಲವಿನ ಗೂಡು ಕಟ್ಟಿದ್ದೇನೆ
ನಿನ್ನ ಹೆಜ್ಜೆಯ ಸ್ಪರ್ಶಕ್ಕಾಗಿ ನನ್ನ ಈ ಮನಸು
ಸಂಭ್ರಮದಿ ಕಾದಿದೆ.

‍ಲೇಖಕರು Admin

September 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: