ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ -8: ಯಂತ್ರದ ಶಬ್ದ ಜೋರಾಗಿತ್ತು …

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 8

ಹಳೇಬೀಡು ಸುಂದರರಾಯರು ಬಂದ ಗಳಿಗೆ ಚೆನ್ನಾಗಿರಲಿಲ್ಲವೋ ಏನೋ, ತುಕ್ಕೋಜಿ ಕೊಂಚ ವ್ಯಗ್ರನಾಗಿದ್ದಂತಿತ್ತು. ಅವನ ವ್ಯಗ್ರತೆಗೆ ಕಾರಣ ಇಷ್ಟೇ. ಮದುವೇ ಸೀಸನ್ನು. ಹರುದೋಗಂಗೆ ಕೆಲಸ ವಪ್ಗಂಡಾಗಿದೆ. ನಿನ್ನೆಯಿಂದ ಈ ಹಾಳು ಸರೋಜಂದು ವಂದೇ ರಾಗ.
ಅದ್ಯಾರೋ ಸಮ್ಮಂದಿಕರ ಮದುವೆಗೆ ಶಿಮೊಗ್ಗಾಗೆ ಒಂದೆರಡು ದಿಸ ಹೋಗಿ ಬರ‍್ತಳಂತೆ. ಯಿಲ್ಲೋ ಹಗಲೂ ರಾತ್ರಿ ಹೊಲೀತಾ ಕೂತರೂ ಮುಗಿಯಲ್ಲ ಅಶ್ಟಿದೆ ಕೆಲಸ. ಯೇನು ಯೀ ಕೆಲಸಾ ನಂಗೊಬ್ನಿಗೇಂತ ವಪ್ಗೆಂಡಿದ್ದಾ. ಯೀಗ ಇವಳು ಹೋದ್ರೆ ಕೆಲಸದ ಗತಿಯೇನಾಗಬೇಡ. ವಪ್ಗೆಂಡಿರಾ ಕೆಲಸಯೆಲ್ಲಾ ನನ್ನೊಬ್ಬನ್ ಕೈನಗೆ ಆಗ್ತತಾ. ಮತ್ತೆ ಆ ಮದುವೇಯೇನು ಹತ್ರದ ಸಮ್ಮಂದಾನಾ? ಅಣ್ಣ-ತಮ್ಮ-ತಂಗೀ ಮಕ್ಳದಾ? ಅದೂ ಅಲ್ಲ. ಅದ್ಯಾರೋ ದೂರದ ಸಮ್ಮಂದ.
ಹೋದ್ರೂ ಕಣ್ಣಿಗೆ ಬೀಳಲ್ಲ ಯಿವಳು, ಹೋಗದೇಯಿದ್ರೂ ಲೆಕ್ಕಕ್ಕೆ ಸಿಗಲ್ಲ. ನಿನ್ನೆಯಿಂದ ವಂದೇ ಸಮ ಮುಸಮುಸ ನಡ್ಸಿದಳೆ. ನಿನ್ನೆಯಿಂದ ಬೇಕೂಂತ ಯಲ್ಲಾ ಕೆಲಸದಗೂ ಯಡವಟ್ಟು ಮಾಡ್ತಿದಳೆ. ಅಂತೂ ಇಂತೂ ಯಲ್ಲಾ ವಂದು ದಾರಿಗೆ ಬಂತೂ ಅನ್ನವಾಗ ತನ್ನ ಹಳೇ ಬಾಲ ಬಿಚ್ಚಿದ್ಲು ಮುಂಡೆ. ಗಾಂಚಾಲಿ ಮುಂಡೆ. ಸಿಟ್ಟಿನಲ್ಲಿ ಒಂದೇ ಸಮನೆ ಯಂತ್ರದ ಪೆಡಲ್ಲನ್ನು ಭರ್ರೋ ಅಂತ ತುಳಿದ.
ಅದೇ ಹೊತ್ತಿಗೆ ಸರಿಯಾಗಿ ಹಳೇಬೀಡು ಸುಂದರರಾಯರು ತಮ್ಮ ಬರವನ್ನು ಸೂಚಿಸಲೋ ಎಂಬಂತೆ ಕೆಮ್ಮಿದರು. ಯಂತ್ರದ ಗಲಾಟೆಯಲ್ಲಿ ತುಕ್ಕೋಜಿಗೆ ಕೇಳಲಿಲ್ಲ. ಅಲ್ಲದೆ ಸದ್ಯ ತನ್ನ ಸಮಸ್ಯೆಯಲ್ಲದೇ ಇನ್ನಾವುದಕ್ಕೂ ತಲೆ ಹಾಕುವ, ಯೋಚಿಸುವ ಮನಸ್ಸೂ ಇರಲಿಲ್ಲ. ಹಳೇಬೀಡು ಸುಂದರರಾಯರು ತುಕ್ಕೋಜಿ ತಮ್ಮತ್ತ ನೋಡುವುದನ್ನೇ ಕಾದರು.
ತಾವು ಕೆಮ್ಮಿದ್ದು ಕೇಳಲಿಲ್ಲವೋ, ಅಥವಾ ತಾವು ಕೆಮ್ಮಿದ್ದನ್ನು ಕೇಳಿಯೂ ತಮ್ಮನ್ನು ಅಲಕ್ಷ ಮಾಡುತ್ತಿದ್ದಾನೋ ಅನಿಸಿ ಇನ್ನೂ ಒಂದಷ್ಟು ಹೊತ್ತು ಕಾದರು. ತುಕ್ಕೋಜಿ ಇತ್ತ ನೋಡಲಿಲ್ಲ. ಒಳಗೆ ಕಾಲಿಡುವುದೋ, ಹಾಗೇ ಹಿಂತಿರುಗುವುದೋ ಎಂದು ಹುಯ್ದಾಡುತ್ತಿರುವಾಗಲೇ ತುಕ್ಕೋಜಿ ಇತ್ತ ಕಣ್ಣು ಹೊರಳಿಸಿದ. ಥಟ್ಟಂತ ಹಳೇಬೀಡು ಸುಂದರರಾಯರು ಕಂಡೂ ಕಾಣದಂತಹ ಒಂದು ನಗೆಯನ್ನು ಉದುರಿಸಿದರು. ತುಕ್ಕೋಜಿ ಬಟ್ಟೆ ಹೊಲೆಯುವುದನ್ನು ನಿಲ್ಲಿಸಿ ಇವರತ್ತ ನೋಡಿದ. ಹಳೇಬೀಡು ಸುಂದರರಾಯರು ಕೈಲಿದ್ದ ಚೀಲವನ್ನು ಮುಂದು ಮಾಡಿಕೊಂಡು ಒಳಗಡಿಯಿಟ್ಟರು.
ತುಕ್ಕೋಜಿಯ ಹೊಲಿಗೆ ಯಂತ್ರದಿಂದ ಒಂದೆರಡು ಅಡಿ ದೂರ ನಿಂತು ’ವಕೀಲ್ ನಾಗರಾಜರಾವ್ ಆಫೀಸ್ ನಾಗ್ಬೂಶಣ ಕಳಿಸಿದ್ರು’ ಅಂದರು. ತುಕ್ಕೋಜಿ ಇವರನ್ನೇ ನೋಡಿದ. ಹಳೇಬೀಡು ಸುಂದರರಾಯರು ಕೈಲಿದ್ದ ಚೀಲವನ್ನು ಮುಂಚಾಚಿದರು.
ಮುಂದುವರೆಯುವುದು….

‍ಲೇಖಕರು avadhi

26 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading