ತುಂಬಾ ಒಳ್ಳೆಯ ಸುದ್ದಿ.ಬಿಳಿಮಲೆ ಸರಿಯಾಗಿ ಹೇಳಿದ್ದಾರೆ.ಕನ್ನಡ ವಿವಿ,ಹಂಪಿಯಲ್ಲಿ ಮೂರು ವರ್ಷ ಬಹಳ ಹತ್ತಿರದಿಂದ ರಹಮತ್ ರನ್ನು ಕಂಡಿದ್ದೇನೆ.ಸೂಫಿ ,ಅವಧೂತರ ಬಗ್ಗೆ ಅಪಾರ ತಿಳುವಳಿಕೆ ,ಅಧ್ಯಯನ ಇದ್ದ ರಹಮತ್ ನಿಜ ಬದುಕಿನಲ್ಲೂ ಸೂಫಿ-ಅವಧೂತ ಪರಂಪರೆಯ ಶ್ರೇಷ್ಠ ಪ್ರತಿನಿಧಿ ಆಗಿದ್ದಾರೆ .
ನಾನು ಹಂಪಿಯಲ್ಲಿ ಕುಲಪತಿ ಆಗಿದ್ದಾಗ ಅವರು ಯಾವುದೇ ಸಭೆಯಲ್ಲಿ ತಾವಾಗಿ ಮೇಲೆ ಬಿದ್ದು ಮಾತಾಡಿದವರಲ್ಲ.’ರಹಮತ್ , ಏನು ಹೇಳುತ್ತೀರಿ ?’ ಎಂದು ನಾನಾಗಿಯೇ ಒತ್ತಾಯಿಸಿ ಕೇಳಿದಾಗ, ಅಪೂರ್ವ ಒಳನೋಟಗಳ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಲೋಹಿಯಾ ಪೀಠದ .ಸಂಚಾಲಕರಾಗಿ ಎಂದಾಗ ,ಸಂಕೋಚದಿಂದ ಬೇಡ ಎಂದವರು ,ನನ್ನ ಒತ್ತಾಯಕ್ಕೆ ಒಪ್ಪಿಕೊಂಡು ,ಅದ್ಭುತ ಯೋಜನೆಗಳನ್ನು ಕಾರ್ಯಗತಗೊಳಿಸಿ ,ಮೂರು ವಿಶಿಷ್ಟ ಗ್ರಂಥಗಳನ್ನು ಹೊರತಂದರು.’ಸಮಾಜವಾದಿ ಹೋರಾಟಗಾರರ ಸಂದರ್ಶನ ‘(ಪೀರ್ ಭಾಷ ),’ಸೊಂಡೂರು ಭೂಹೋರಾಟ’( ಅರುಣ್ ಜೋಳದ ಕೂಡ್ಲಿಗಿ ),ಹೆಬ್ಬಳ್ಳಿ ಭೂ ಹೋರಾಟ ‘(ಸತೀಶ್ ಪಾಟೀಲ್ )-ಇವು ಮೂರು-ಅಪಾರ ಶ್ರಮ ,ಕ್ಷೇತ್ರ ಅಧ್ಯಯನ ಇರುವ ಪುಸ್ತಕಗಳು ಲೋಹಿಯಾ ನೆನಪಿಗೆ ಮಹತ್ವದ ಕೊಡುಗೆಗಳು.
‘ಸಾಂಸ್ಕೃತಿಕ ಮುಖಾಮುಖಿ’ವಿಚಾರ ಸಂಕಿರಣ ಚರ್ಚೆಗಳ ಪೂರ್ವಭಾವಿ ಸಭೆಗಳು ,ಸಿದ್ಧತೆಗಳು ನಡೆದಾಗ -ರಹಮತ್ ಅವರ ಶೈಕ್ಷಣಿಕ ಶಿಸ್ತು ಕಾಳಜಿಗಳನ್ನು ನಾನು ನೇರವಾಗಿ ಗಮನಿಸಿದ್ದೆ.
ಸಾಂಸ್ಕೃತಿಕ ಕ್ಷೇತ್ರಕಾರ್ಯ ,ಅಧ್ಯಯನ ಮತ್ತು ಪ್ರಮಾಣಬದ್ಧ ಪ್ರಕಟಣೆಗಳ ಪರ್ಯಾಯ ದಾರಿಯ ಮೂಲಕವೇ ಎಲ್ಲ ಬಗೆಯ ಅತಿರೇಕಗಳನ್ನು ,ಮೂಲಭೂತವಾದಗಳನ್ನು ನಿರಾಕರಿಸಬೇಕು ಎನ್ನುವ ‘ಸೂಫಿ-ಲೋಹಿಯಾ ‘ಬೆಸುಗೆಯ ರಹಮತ್ ಗೆ ಪ್ರೀತಿಯ ಅಭಿನಂದನೆಗಳು.
ವಿವೇಕ ರೈ
0 ಪ್ರತಿಕ್ರಿಯೆಗಳು