ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರಿದು ಸೇರು, ಸಾಗರದ ಒಡಲ..

‘ಕಡೆಗಣಿಸು, ನೀ ರತ್ನಗರ್ಭಾ.!’
ವಸುಂಧರಾ ಕೆ ಎಂ

ಕಂಗೆಡಿಸುವವರ ಕಿರುಗಣ್ಣಿನಲೆ
ಕಡೆಗಣಿಸು, ಹಗಲಿರುಳು
ಅವರೆದೆಯು ಕುದಿಯುತಿರಲಿ..

ದುಗುಡದಲಿ ಮನವ ಮುದುಡ
-ಗೊಡದೆ ಎದೆಗಾರಿಕೆಯ ಅಪ್ಪಿಕೋ,
ನಿಜದ ದನಿಗೆ ನೀ ಕಿವಿಯನಾಂತು..

ನಿನ್ನಳವು ಮಿಗಿಲಿಹುದು; ಪರರ
ಇತಿಮಿತಿಗೆ ತಲೆ ಕೊಡವಿಬಿಡು,
ಅವರೆಣಿಕೆಗೂ ಮಿಕ್ಕು ಮೀರಿ ಬೆಳೆ..

ಎಡೆಗೊಡದೆ ಹುಸಿನುಡಿಗೆ
ಕಿವುಡುಗಿವಿಯಾಗಿ ಬಿಡು,
ಜಾಣೆಯಾದರೆ ನೀನು ನಿಜದಿ..

ಮಣಿಸು ಹುಸಿಯ ನುಡಿವವರ
ಸಂಯಮದ ಶಕ್ತಿಯಲಿ;
ಚದುರದಿರಲಿ ನಿನ್ನ  ಮತಿಯು..

ಕಳೆಯ ಕೊಳೆಯು ಕೊಚ್ಚಿ
ಹೋಗುವಂತೆ ಮಹಾಮಳೆಯಾಗಿ
ಸುರಿದು ಸೇರು, ಸಾಗರದ ಒಡಲ..

ಮರೆಯದಿರು; ಮಹಾಜಲಧಿ ನೀನೀಗ,
ಅನನ್ಯ ವಿಸ್ಮಯ ಅಡಗಿರುವ
‘ರತ್ನಗರ್ಭಾ ವಸುಂಧರಾ’…!!!!

‍ಲೇಖಕರು avadhi

25 September, 2019

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading