ಸುಬ್ಬು ಹೊಲೆಯಾರ್
ಇವತ್ತು ಬೆಳಿಗ್ಗೆ
ಎಷ್ಟೊಂದು ಹಕ್ಕಿಗಳು ತಮ್ಮ ಉಸಿರನ್ನ
ನಮ್ಮ ಕಿವಿಗೆ ತಾಕಿಸಿಬಿಟ್ಟವಲ್ಲ
ಈ ಸಂಕಷ್ಟದ ಉಸಿರಿನ ದಾರವನ್ನು
ಸೀಳಿ ಸೀಳಿ ನೋಡಿದೆ
ಸೀಳಿದಷ್ಟು ಸಂಕಟ ದುಪ್ಪಟ್ಟಾದಂತೆ ಕೇಳಿಸಿತು
ಸೀಳಿದ ಬೆರಳಲ್ಲಿ ತೇವದ
ದು:ಖ ಸಾಗರವೇ ಅಂಟಿಕೊಂಡಿದ್ದ ಬೆರಳಿನ ತೂಕ
ಲೋಕಕ್ಕಾಗುವಷ್ಟು ಉಪ್ಪಿನ ಮೂಟೆಯಷ್ಟಿತ್ತು
ಎಲ್ಲಾ ಹೇಗಿದ್ದೀರಿ ?
ನಾನು ಕೇಳಬಹುದೇ ಯಾರನ್ನಾದರೂ
ತಲ್ಲಣದ ಈ ಘಳಿಗೆಯಲ್ಲಿ
ಸುಖ ಮಲಗಿದೆ ಹಸಿವು ದು:ಖ ನಡೆಯುತ್ತಿದೆ
ಕಣ್ಣೀರು ಕೊಲೆಯಾಗಿದೆ
ಕರುಣೆ ಬಂದಿಯಾಗಿದೆ ಇಷ್ಟು ಸಾಕು.
ನಾನು ನೆಮ್ಮದಿಯಾಗಿದ್ದೇನೆ
ನೀವು ಉಸಿರಾಡಿದ ಉಸಿರಿನಿಂದ
ಯಾರಿಗದರೂ ಸೇರಿದ್ದಾ ಈ ಉಸಿರು
ಹಕ್ಕಿಲ್ಲ ಯಾರಿಗೂ ಕೇಳಲು
ಎಲ್ಲರಿಗೂ ನಾನು ಕೇಳಿದೆನೆಂದು ಹೇಳಿ
ಎನ್ನುವ ಉಸಿರಲ್ಲಿ ಎಲ್ಲರ ಉಸಿರಿದೆ ಗೆಳೆಯ
ನೋಡಿದ್ದೀರಾ !
ಎಲೆಗಳು ಅಲುಗಾಡುವುದನ್ನ
ಈ ಉಸಿರಿನ ಸಾಕ್ಷಿಗೆ.
ಕಣ್ಣೀರು ಕೊಲೆಯಾಗಿದೆ
ಹಸಿವು ದುಃಖ ಬಂಧಿಯಾಗಿದೆ…..
ಕವಿತೆಯಾಗಲು ಇಷ್ಟು ಸಾಕು….ಸುಬ್ಬೂ
ತೀವ್ರವಾದ ಕವಿತೆ…..ಕಾಡುವ ಸಾಲುಗಳು….