ಸುಬ್ಬು ಹೊಲೆಯಾರ್ ಕವಿತೆ: ಎಲ್ಲರಿಗೂ ನಾನು ಕೇಳಿದೆನೆಂದು ಹೇಳಿ

ಸುಬ್ಬು ಹೊಲೆಯಾರ್

ಇವತ್ತು ಬೆಳಿಗ್ಗೆ
ಎಷ್ಟೊಂದು ಹಕ್ಕಿಗಳು ತಮ್ಮ ಉಸಿರನ್ನ
ನಮ್ಮ ಕಿವಿಗೆ ತಾಕಿಸಿಬಿಟ್ಟವಲ್ಲ

ಈ ಸಂಕಷ್ಟದ ಉಸಿರಿನ ದಾರವನ್ನು
ಸೀಳಿ ಸೀಳಿ ನೋಡಿದೆ
ಸೀಳಿದಷ್ಟು ಸಂಕಟ ದುಪ್ಪಟ್ಟಾದಂತೆ ಕೇಳಿಸಿತು

ಸೀಳಿದ ಬೆರಳಲ್ಲಿ ತೇವದ
ದು:ಖ ಸಾಗರವೇ ಅಂಟಿಕೊಂಡಿದ್ದ ಬೆರಳಿನ ತೂಕ
ಲೋಕಕ್ಕಾಗುವಷ್ಟು ಉಪ್ಪಿನ ಮೂಟೆಯಷ್ಟಿತ್ತು

ಎಲ್ಲಾ ಹೇಗಿದ್ದೀರಿ ?
ನಾನು ಕೇಳಬಹುದೇ ಯಾರನ್ನಾದರೂ
ತಲ್ಲಣದ ಈ ಘಳಿಗೆಯಲ್ಲಿ

ಸುಖ ಮಲಗಿದೆ ಹಸಿವು ದು:ಖ ನಡೆಯುತ್ತಿದೆ
ಕಣ್ಣೀರು ಕೊಲೆಯಾಗಿದೆ
ಕರುಣೆ ಬಂದಿಯಾಗಿದೆ ಇಷ್ಟು ಸಾಕು.

ನಾನು ನೆಮ್ಮದಿಯಾಗಿದ್ದೇನೆ
ನೀವು ಉಸಿರಾಡಿದ ಉಸಿರಿನಿಂದ

ಯಾರಿಗದರೂ ಸೇರಿದ್ದಾ ಈ ಉಸಿರು
ಹಕ್ಕಿಲ್ಲ ಯಾರಿಗೂ ಕೇಳಲು
ಎಲ್ಲರಿಗೂ ನಾನು ಕೇಳಿದೆನೆಂದು ಹೇಳಿ
ಎನ್ನುವ ಉಸಿರಲ್ಲಿ ಎಲ್ಲರ ಉಸಿರಿದೆ ಗೆಳೆಯ
ನೋಡಿದ್ದೀರಾ !
ಎಲೆಗಳು ಅಲುಗಾಡುವುದನ್ನ
ಈ ಉಸಿರಿನ ಸಾಕ್ಷಿಗೆ.

‍ಲೇಖಕರು avadhi

May 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nagraj Harapanahalli.karwar

    ಕಣ್ಣೀರು ಕೊಲೆಯಾಗಿದೆ
    ಹಸಿವು ದುಃಖ ಬಂಧಿಯಾಗಿದೆ…..

    ಕವಿತೆಯಾಗಲು ಇಷ್ಟು ಸಾಕು….ಸುಬ್ಬೂ

    ಪ್ರತಿಕ್ರಿಯೆ
  2. Malati Bhat

    ತೀವ್ರವಾದ ಕವಿತೆ…..ಕಾಡುವ ಸಾಲುಗಳು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: