ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನ್ಯೂಸ್ ಚಾನಲ್ ಸ್ವಾಮಿ ಇದು ನ್ಯೂಸ್ ಚಾನಲ್ …

ಸುದ್ದಿವಾಹಿನಿಗಳು ತಿದ್ದಿಕೊಳ್ಳಬೇಕು

-ಎಚ್ .ಆನಂದರಾಮ ಶಾಸ್ತ್ರಿ

ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.

* ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರಗೊಂಡ ಅವರ ಸಂದರ್ಶನದಲ್ಲಿ ವಾಹಿನಿಯ ವರದಿಗಾರ್ತಿಯು ಜಿವೆಂ ಅವರಿಗೆ ಕೇಳಿದ ಪ್ರಶ್ನೆ ಹೀಗಿತ್ತು. “ಈಗ ನಿಮಗೆ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ, ಕನ್ನಡಕ್ಕೆ ಮುಂದೆ ಏನು ಕೆಲಸ ಮಾಡಬೇಕೂಂತಿದೀರಿ?”
ಕನ್ನಡಕ್ಕಾಗಿ ದುಡಿಯುತ್ತಲೇ 97 ವಸಂತಗಳನ್ನು ದಾಟಿರುವ ಹಿರಿಯ ಜೀವಕ್ಕೆ ಕೇಳುವ ಪ್ರಶ್ನೆಯೇ ಇದು? ಈ ಪ್ರಶ್ನೆ ಆಲಿಸಿ ಜಿವೆಂ ಅವರಿಗೆ ನಗು ಬಂತು.
ಅವರು, “ನನಗೀಗ 98ನೆಯ ವರ್ಷ. ಎಲ್ಲ ಕೆಲಸಗಳನ್ನೂ ನಿಲ್ಲಿಸಬೇಕೂಂತ ಇದ್ದೇನೆ”, ಎಂದು ಉತ್ತರಿಸಿದರಾದರೂ, ಬೆನ್ನಿಗೇ, “ಅಧ್ಯಕ್ಷ ಪದವಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ”, ಎಂದು ನುಡಿದು ಮುಂದಿನೆರಡು ವರ್ಷಗಳಲ್ಲಿ ತಾವು ಕೈಕೊಳ್ಳಬೇಕೆಂದಿರುವ ಕನ್ನಡದ ಕೆಲಸದ ಬಗ್ಗೆ ವಿವರಿಸಿ ಆ ವರದಿಗಾರ್ತಿಯ  ಬೆಲೆ ಉಳಿಸಿದರು

‍ಲೇಖಕರು avadhi

11 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading