ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ.ನಾಗಣ್ಣನವರ ‘ಹರಿವ ನದಿ ಸಾಕ್ಷಿ’ ಹಾಗೂ ‘ಅಳಬೇಡ ಕಂದ’…

ಸುಭಾಷ್ ರಾಜಮಾನೆ

ಗೂಗಿ ವಾ ಥಿಯಾಂಗೋ ಆಧುನಿಕ ಆಫ್ರಿಕನ್ ಲೇಖಕರಲ್ಲಿಯೇ ಅತ್ಯಂತ ಮುಖ್ಯನಾದವನು. ಗೂಗಿಯ ‘The River Between’ ಹಾಗೂ ‘Weep Not, Child’ ಎರಡು ಕಾದಂಬರಿಗಳನ್ನು ಡಾ.ಸಿ.ನಾಗಣ್ಣನವರು ಕನ್ನಡಕ್ಕೆ ‘ಹರಿವ ನದಿ ಸಾಕ್ಷಿ’ ಮತ್ತು ‘ಅಳಬೇಡ ಕಂದ’ ಶೀರ್ಷಿಕೆಗಳಲ್ಲಿ ಅನುವಾದಿಸಿದ್ದಾರೆ. ಅವರು ಈ ಮೊದಲು ಆಫ್ರಿಕನ್ ಲೇಖಕ ಚಿನುವಾ ಅಚೀಬೆ ಅವರ ‘Things Fall Apart’ ಕಾದಂಬರಿಯನ್ನು ‘ಭಂಗ’ ಎಂದು ಅನುವಾದಿಸಿದ್ದರು.

ನಾಗಣ್ಣನವರು ಆಫ್ರಿಕನ್ ಕಪ್ಪು ಸಾಹಿತ್ಯವನ್ನು ಕನ್ನಡಕ್ಕೆ ತರುವುದರ ಮೂಲಕ ಅಲ್ಲಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳನ್ನು ಕನ್ನಡದಲ್ಲಿಯೇ ಅರಿತುಕೊಳ್ಳಲು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವುಗಳ ಜೊತೆಯಲ್ಲಿ ಕನ್ನಡದ ದಲಿತ ಸಾಹಿತ್ಯವನ್ನು ಮತ್ತಷ್ಟು ಸೂಕ್ಷ್ಮವಾಗಿ ಅವಲೋಕಿಸಲು ಇಂತಹ ಅನುವಾದವು ಸಹಾಯ ಮಾಡುತ್ತದೆ. ಹಿರಿಯರಾದ ಡಾ.ನಾಗಣ್ಣನವರು ಗೂಗಿಯ ಎರಡೂ ಕೃತಿಗಳನ್ನು ನನಗೆ ಓದಲು ಕಳಿಸಿಕೊಟ್ಟಿದ್ದಾರೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್…

‍ಲೇಖಕರು Avadhi

7 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading