ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಜಿ ಕೆ..ಒಂದೆಸಳ ಹುಲ್ಲಲ್ಲೂ ಉದ್ಯಾನವನ ಬೆಳೆಸಬಲ್ಲಿರಿ

ಸಿ ಜಿ ಕೆ ನೆನಪಿನಲ್ಲಿ ಉಗಮ ಶ್ರೀನಿವಾಸ್ ಬರೆದ ಕವನ ಅವಧಿ ಓದುಗರಿಗಾಗಿ

ಉಗಮ ಶ್ರೀನಿವಾಸ್

ರಂಗ ನಿದೇ೯ಶಕ, ಸಂಘಟಕ ಸಿ.ಜಿ.ಕೆ ಅವರು ನಮ್ಮನ್ನಗಲಿ ಇದೇ ತಿಂಗಳ 10 ಕ್ಕೆ 6 ವಷ೯ವೇ ಕಳೆದು ಹೋಯಿತು. ಅವರು ನಿಧನರಾಗಿದ್ದಾಗ ಅವರ ಬಗ್ಗೆ ಬರೆದ ಪದ್ಯ ಇದು

ಸಿಜಿಕೆ…….
ನೀವೊಂದು ಶುದ್ಧ ಕವಿತೆಯ ಹಾಗೆ!
ಬೆಟ್ಟವನ್ನು ಕರಗಿಸಬಲ್ಲಿರಿ
ಒಂದೆಸಳ ಹುಲ್ಲಲ್ಲೂ
ಉದ್ಯಾನವನ ಬೆಳೆಸಬಲ್ಲಿರಿ.
.
ನೀವೊಂದು ಪ್ರತಿಮೆ!
ಕಡೆದಿಟ್ಟ ಶಿಲೆಯ ಮೇಲೆ ಕೂತ
ಹಕ್ಕಿಯನ್ನು ಮಾತಿಗೆಳೆಯುವಿರಿ.
.
ನೀವೊಂದು ಬತ್ತದ ನದಿ
ಹರಿಯುವ ನದಿಗೆ
ಮೈಯೆಲ್ಲಾ ಕಾಲು ಎನ್ನುವ ಹಾಗೆ
ನುಗ್ಗುತ್ತಲೇ ಇದ್ದಿರಿ
ದಣಿವಿಲ್ಲದಂತೆ.
.
ನೀವೊಂದು ಬೇರು ಬಿಟ್ಟ ಮರ
ಗೂಡು ಕಟ್ಟುವ ಹಕ್ಕಿಗಳಿಗೆ
ಜಾಗ ಕೊಟ್ಟಿರಿ
ದಾರಿ ಹೋಕರಿಗೆ ನೆರಳು ಕೊಟ್ಟಿರಿ.
.
ನೀವೊಬ್ಬ ಪವಾಡ ಪುರುಷ
ಮಾಯಾವಿ ಮಾಡದ್ದನ್ನು
ಜಾದೂಗಾರನಿಗೆ ಕೈಗೆಟುಕದ್ದನ್ನು
ಮಾಡಿ ತೋರಿಸಿದಿರಿ.
.
ನೀವೊಬ್ಬ ಸಂತ,
ಸ್ವಂತಕ್ಕಲ್ಲ
ಖಾವಿ ತೊಡದೆ
ಕಲ್ಯಾಣ ಕಟ್ಟಿದಿರಿ!

‍ಲೇಖಕರು G

8 January, 2013

2 Comments

  1. hipparagi Siddaram

    ಹೌದು ಸರ್, ಸಿಜಿಕೆ ಸರ್ ಇದ್ದಿದ್ದೇ ಹಾಗೆ….ಆಗುವುದಿಲ್ಲವೆಂಬುದನ್ನು ಮಾಡಿ ತೋರಿಸಿದ ರಂಗ ಮಹಾತ್ಮರು !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading