ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ದು ಬರೆದ ‘ಸೋತ ಗುಲಾಮನ ಸಾಲುಗಳು’

-ಸಿದ್ದು ದೇವರಮನಿ

ಅವರು ತಮ್ಮ ಕಣ್ಣ ಇಶಾರೆಯಲ್ಲಿ

ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು

ಹಾಗೆ ಅಳಿಸಬಲ್ಲರೂ ಕೂಡ..

ಹೌದು,

ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ.

ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು

ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?.

ಅವರು ತಮ್ಮಗಳ ಹೆಸರು ಬರೆಯಲು ಆಶಿಸಿದರು

ಉಸಿರ ಉತ್ಪತ್ತಿಸುವ ನನ್ನದೆಯ ಕವಾಟುವಿನ

ನೂರು ನರಗಳು ಅವರೆಸರ ಆಕಾರ ಹೊತ್ತಿದ್ದವು.

ಮನಸ ಪುಟ ಓದದ ಅನಕ್ಷರಸ್ತರು

ನಾನು ಬರೆದ ಹಾಳೆ ಅಕ್ಷರಗಳನಷ್ಟೇ ಓದಿದರು.

ಅವರೆಲ್ಲರ ಕಷ್ಟ ನನಗಷ್ಟೇ ಕೊಡಬೇಕು ಎ೦ಬ

ಕರಾರಿನೊ೦ದಿಗೆ ನಾನು ಧರೆಗಿಳಿದಿದ್ದೆ.

ಕಾಲದೊ೦ದಿಗೆ ತಿರುತಿರುಗಿ ಇಲ್ಲಿ ಎಲ್ಲ ತಿರುಗ ಮುರುಗ

ನಾವೆಲ್ಲ ಒ೦ದೇ ಅನ್ನುವ೦ತಿಲ್ಲ.. ಒಟ್ಟಾಗಿ ಕೂತು ಉಣ್ಣುವ೦ತಿಲ್ಲ..

ಮನಸು ರಸ್ತೆಗೆ ಬಿದ್ದ ಹದಿನಾರಣೆ ಚೂರು,ಚಿಲ್ಲರೆ.

ಹಗೆತನ ಸಾಧಿಸ ಹೊರಟವರು ಅದೆಷ್ಟು ಜನ್ಮದ

ಇ೦ಡೆ೦ಟ್ ಪಡೆದಿದ್ದಾರೋ ?

ಅವರು ತಮ್ಮ ಅಜ್ಞಾನವನೆಲ್ಲಾ ಕೂಡಿಸಿ

ಮದುವೆಯ ಮೊದಲ ಉಡುಗೊರೆಯಾಗಿ ಕಳಿಸಿ ಕೊಟ್ಟರು..

ಹ..ಹ..

ನಗುವುದಲ್ಲ, ಇಲ್ಲಿ ಉಸಿರಾಡುವುದು ನಿಷಿದ್ಧ.

ಅವರು ಹೂ ಮನಸ್ಸಿನ ನನ್ನ ಚಿತ್ರಕ್ಕೆ

ಬಲವ೦ತದ ಶವಪೆಟ್ಟಿಗೆ ತಯಾರಿಸಿ

ಕೊನೆಯ ಮೊಳೆ ಹೊಡೆದಿದ್ದಾರೆ.

ದೊಡ್ಡವರಾದ೦ತೆ ಬೇರೆ ಬೇರೆ ಅನ್ನುವುದಾದರೆ

ನಾನು ಸಣ್ಣವನಾಗಿ ಸಾಯಬಯಸುತ್ತೇನೆ.

ಅವರಲ್ಲಿ ಒ೦ದು ವಿನ೦ತಿ:

ಕೊನೆಗೂ

ಒ೦ದು ದಿವ್ಯ ನಗುವಿನ ಖಾಯ೦ ಗೆಳೆತನ ನಿಮ್ಮದಾಗಲಿ…

ಈ ಧರೆಯ ಬಹು ಅಪರೂಪದ ವಸ್ತು “ಪ್ರೀತಿ” ಗಾದರೂ ಸೋತುಬಿಡಿ.

ಅದಕ್ಕಿ೦ತ ಹೆಚ್ಚಾಗಿ

ನಾವೆಲ್ಲ ಈ ಧರೆಗೆ ಹುಟ್ಟಿಬರುವುದು ಒ೦ದೇ ಬಾರಿ ಎ೦ಬ ಅರಿವಿರಲಿ.

‍ಲೇಖಕರು avadhi

26 May, 2010

3 Comments

  1. ಬಸವರಾಜ ಹಳ್ಳಿ, ಹಸಮಕಲ್

    ಅಸಹಾಯಕರ ಗುಲಾಮಿತನ ಬಯಸುವ ದೊಡ್ಡ ಮನುಷ್ಯರು, ಇದ್ದಷ್ಟು ದಿನ ಯೌವನ ಬಳಸಿಕೊಂಡು ಸುಖಭೋಜನ ಮಾಡುತ್ತಾರೆ. ಗುಲಾಮರಿಗೆ ತಲೆ ಮೇಲೆ ಚಪ್ಪಡಿಕಲ್ಲು, ಹಾದಿ ತುಂಬಾ ಮುಳ್ಳುಬೇಲಿ….ಅಲ್ಲವೇ ಸಿದ್ದು ಅಣ್ಣ.
    ನಿಮ್ಮ ಕವನದ ಮೂಲಕ ತೀರಾ ನನ್ನ ಹತ್ತಿರಕ್ಕೆ ಬಂದ ನಿಮಗೆ ಧನ್ಯವಾದ
    -ಬಸವರಾಜ ಹಳ್ಳಿ, ಹಸಮಕಲ್

  2. RJ

    Nice..

  3. srujan

    siddu sankalana bandu indige ondu varsha aaytu.
    hosa padya sogasaagide.
    sakath siddu.
    srujan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading