– ಲಿಯೋ ಟಾಲ್ ಸ್ಟಾಯ್
ಎಲ್ಸಿ ನಾಗರಾಜ್ ಹೇಳಿದಂತೆ-
ಒಂದು ಹೊರೆ ಸೌದೆ ಕಡಿದ ತಾತ ಅದನ್ನ ಹೊತ್ತು ಮನೆಯ ದಾರಿ ಹಿಡಿದ. ಮನೆಯ ದಾರಿ ತುಂಬಾ ದೂರವಿತ್ತು , ತಾತನಿಗೆ ದಣಿವಾಯಿತು.
ಸೌದೆ ಹೊರೆಯನ್ನ ಕೆಳಗಿಟ್ಟ ತಾತ ” ನನಗೆ ಸಾವಾದರೂ ಬರಬಾರದಾ ! ‘ ಅಂತಾ ಗೊಣಗಿದ
ತಾತನ ಮುಂದೆ ಬಂದು ನಿಂತ ಸಾವು ‘ ನನ್ನಿಂದ ಏನಾಗಬೇಕಿತ್ತು !? ‘ ಅಂತಾ ಕೇಳಿತು
ತಾತ ಧೈರ್ಯದಿಂದ ಎದ್ದು ನಿಂತು ‘ ನನ್ನ ಸೌದೆ ಹೊರೆ ಹೊತ್ತು ನನ್ನ ಮನೆಗೆ ನಡೆ ‘ ಎಂದ
~ ~ ~ ~ ~
( ಜೀತಗಾರರ ಮಕ್ಕಳಿಗೆ ಅಕ್ಷರ ಕಲಿಸುತ್ತಾ ಹೇಳಿದ ಕತೆ )
ಚಂದ