ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಕ್ಷಿ‌ ಕೊಡಿ..

ರವಿಕುಮಾರ್ ಟೆಲೆಕ್ಸ್ 

ಬಾಯಿಗೆ ಬಾವುಟ ತುರುಕಿ
ಕಣ್ಣಿಗೆ ಮೇಣವ ಮೆತ್ತಿ
ಎದೆಗಳಿಗೆ ಗುಂಡುಗಳ ಸುರಿದು
ದೇಶಭಕ್ತಿಯ‌ ಹಾಡು ಮೊರೆದಿದೆ
ಕೇಳಿಸಿಕೊಂಡಿರಾ…?

ನಾನೇ ದೇಶ
ನೀನು ಪರದೇಶಿ
ತುಂಡು ಕಾಗದ, ಮುಷ್ಟಿ ಮಣ್ಣಾದರೂ
ಗಂಟಿಕ್ಕಿ ಕೊಂಡಿರು
ನಿನ್ನ ಮುತ್ತಜ್ಜನ ಮೂಳೆ-ಮಜ್ಜನಗಳ ವಂಶಕಣವಾದರೂ ಬೇಕು
ಇನ್ನೇನು ವಿಚಾರಣೆ ಆರಂಭವಾಗಲಿದೆ.

ಹನುಮಂತನಾಗು ಎದೆ ಸೀಳಿ
ಸಾಕ್ಷಿ ಒದಗಿಸಲು
ಇಲ್ಲವಾದರೆ;
ಬಂಗಾಳಕೊಲ್ಲಿಯ
ದಡದಲ್ಲೋ ತೇಲಿಬರುವ
ಗಡಿಯ ಕಣಿವೆಯಲ್ಲೋ
ಸೈನಿಕರ ಕಾಲಿಗೆ ಸಿಗುವ
ವಲಸಿಗ ಶವವಾಗಿ ಮಹಜರ್ ನಡೆದು ಬಿಟ್ಟೀತು!

ಸದ್ದು……..;
ಪ್ರಜಾಪ್ರಭುತ್ವ ದ ಮೆರವಣಿಗೆ ಬರುತ್ತಿದೆ
ಬಾಯಿ ಬಿಡಬೇಡ

‍ಲೇಖಕರು avadhi

14 December, 2019

1 Comment

  1. RAJENDRA BURADIKATTI

    ಒಳ್ಳೆಯ ಧ್ವನಿಪೂರ್ಣ ಕವಿತೆ, ಅಭಿನಂದನೆಗಳು – ರಾಬು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading