ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಹಿ ಹಾಕಿ ಒಪ್ಪಿಕೋ, ಇದು ಅಪ್ಪ ಹಾಕಿದ ಆಲದ ಮರ'

– ಸುರೇಶ್ ಎಲ್ ರಾಜಮಾನೆ

ರನ್ನಬೆಳಗಲಿ


ಹಗಲು ಬಾವಲಿಗಳು
ಬೇವಿನ ಮರದಲ್ಲಿ
ಸಿಹಿಯನ್ನು ಕಂಡೆನು ಕೆಲವು
ದಿನಗಳ ಹಿಂದೆ
 
ಎತ್ತರದಲ್ಲಿದ್ದ ಆ ಮರದಲ್ಲಿ
ಮತ್ತಾವುದೋ ಒಂದು
ಲೋಕವನ್ನು ಕಂಡಂತಾಯಿತು.
 
ಹೊಳೆವ ನಕ್ಷತ್ರಗಳೆರಡು
ಬಳಕೆಯ ಜೊತೆಗೆ
ಬೆಳಕನ್ನು ಹಂಚಿದವು
 
ಉಳಿಸಿದವು, ಬೆಳೆಸಿದವು
ಮಾತೆಯ ಮರವನ್ನು
ಶಕ್ತಿಯುತವಾಗಿ
 
ಮುಕ್ತಿ ದೊರಕಿತ್ತು ಅಂದು
ಆ ಮರದ ನೆರಳಿಗೆ ಎರಗಿದಾಗ…
 
ಮರುದಿನದ ಬೆಳಕು
ಭಯವನ್ನು ಬಾಯಿಗಿಟ್ಟಿತು
ನುಂಗಲಾಗದಂತೆ
 
ಆ ಬೇವಿನ ಮರದಿ
ಜೋತು ಬಿದ್ದಿವೆ ತೂತು ತುಂಬಿಕೊಳ್ಳಲು
ಹಗಲು ಬಾವಲಿಗಳು
 
ಬೇತಾಳನ ಬೆಳಕಲ್ಲಿ
ಕತ್ತಲಲ್ಲಷ್ಟೇ ಅಲ್ಲ ಹಿತ್ತಲಲ್ಲೂ ಕಳ್ಳತನದ ಮಾತು
ಬಿತ್ತಿದೆದೆಗೆ ಬರಿ ಇಟ್ಟು
 
ಕಾಲ-ನೆತ್ತಿ
ಕುಳಿತು ಮೊಳಕೆಯೊಡೆಯುತಿವೆ
ಮರದಲ್ಲಿಯೇ
 
ಹಕ್ಕಿಗಳಿಟ್ಟ ಹಿಕ್ಕಿಕಾಳಿನಿಂದ
ಭಕಾಸುರನ ಬೀಜಗಳು
ನಭವು ಸುಮ್ಮನಿದೆ ಲೋಭವು ಸವಿಯುತಿದೆ
 
ಜಗವು ಮಲಗಿದೆ
ನೆರಳಲ್ಲಿ ಹೊಟ್ಟೆಗಿದ್ದಂತೆ ಒಬ್ಬಟ್ಟು.
 
ಮತ್ತೆ ಕಹಿಕಾರುತಿದೆ
ಆ ಮರವು
ಮತ್ತದೇ ಮಾತು ಉಲಿವ ನಾಲಿಗೆಯ ಮೇಲೆ
 
ಬೇವು ಕಹಿ ಕಹಿ .. ಕಹಿ ಅಷ್ಟೆ
ಸಹಿ ಹಾಕಿ ಒಪ್ಪಿಕೋ…
ಇದು ಅಪ್ಪ ಹಾಕಿದ ಆಲದ ಮರ…!!
 

‍ಲೇಖಕರು G

5 June, 2014

4 Comments

  1. mmshaik

    nice

  2. suresh rajamane

    thanq

  3. Anonymous

    Nice

  4. Sadashiv

    Very nice lines sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading