ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ ಹೊಸ ಕವಿತೆ- ಯುದ್ಧ ಗೀತೆ

ಸವಿತಾ ನಾಗಭೂಷಣ

————–

ಅಯ್ಯೋ ಸೈರನ್ ಮೊಳಗಿದೆ

ಬೆಂಕಿ ಬಿದ್ದಿದೆ, ಹಗೆ-ಹೊಗೆ

ಧೂಳು ಎದ್ದಿದೆ.

ಅದೆಷ್ಟೋ ದೂರದಿಂದ

ನಡೆದು ಬಂದಿರುವೆ

ನಿಮಗೆ ನೀಡಲೆಂದು

ಉಡುಗೊರೆ ತಂದಿರುವೆ

ಬೆಂದು ಮುದ್ದೆಯಾದ 

ನನ್ನೀ ಹಸುಗೂಸ

ತಟ್ಟೆಯಲಿಟ್ಟು ಕೊಡುವೆ

ಇಗೊಳ್ಳಿ ಇದನ್ನೇ

ಒಪ್ಪಿಸಿಕೊಳ್ಳಿ ಹೂಗುಚ್ಛದಂತೆ

 ಈ ಮಾಂಸದ

ಮುದ್ದೆ -ನನ್ನಾತ್ಮದ ತುಣುಕು

ಅದರ ಹೂ-ನಗು

ಹಾರೈಸುತಿದೆ….

ದೊರೆಗೆ ಜಯವಾಗಲಿ!

‍ಲೇಖಕರು avadhi

20 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading