ನಾಲಿಗೆ ಸವೆಯುತ್ತೋ ಇಲ್ಲವೊ ಗೊತ್ತಿಲ್ಲ. ಮಾತುಗಳು ಸವಕಲಾಗೋದು ಮಾತ್ರ ನಿಜ. ಕಿವಿಗೆ ಹಿತವಾಗೋವರೆಗೆ ಮಾತ್ರವೇ ಮಾತಿಗೆ ಕಿಮ್ಮತ್ತು. ಇವತ್ತು ಹೇಳಿದ್ದನ್ನೇ ನಾಳೇನೂ ಹೇಳಿದ್ರೆ “ಹಾಡಿದ್ದೇ ಹಾಡೋ ಕಿಸ್ಬಾಯಿದಾಸ” ಅನ್ನೋ ಕಾಮೆಂಟು ಹುಟ್ಟುತ್ತೆ. ರೂಢಿಯಲ್ಲಿರೋ ಪಡೆನುಡಿಗಳ ಗತಿಯೂ ಇಷ್ಟೆ. ಪತ್ರಿಕೋದ್ಯಮವೂ ಸೇರಿದಂತೆ ಬರವಣಿಗೆಯಲ್ಲಿ ಕಂಡುಬರೋ ಅಂಥ ಕೆಲವು ಸವಕಲು ಸಾಲುಗಳನ್ನು ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂಪಾದಕ ವಿಶ್ವೇಶ್ವರ ಭಟ್ “ಜನಗಳ ಮನ” ಅನ್ನೋ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅವನ್ನು ಕ್ಲೀಷೆಗಳು ಅಂತಾ ಅವರು ಕರೆದಿದ್ದಾರೆ. ನೋಡಿ:
ಹನುಮಂತನ ಬಾಲದಷ್ಟೇ ಉದ್ದವಾಗಿತ್ತು
ಬಿಸಿಬಿಸಿ ಮಸಾಲೆ ದೋಸೆಯಂತೆ ಖರ್ಚಾದವು
ಓಬೀರಾಯನ ಕಾಲದ್ದು
ಧೋ ಎಂದು ಸುರಿಯುವ ಮಳೆ
ನಾಟಕೀಯ ಬೆಳವಣಿಗೆ
ಸಿನಿಮೀಯ ಮಾದರಿಯಲ್ಲಿ
ಯಾವುದಕ್ಕೂ ಕಾದು ನೋಡಬೇಕು
ಹಿಂದಿರುಗಿ ನೋಡಲಿಲ್ಲ
ಸೂರ್ಯನಷ್ಟೇ ಸತ್ಯ
ಛಲ ಬಿಡದ ತ್ರಿವಿಕ್ರಮ
ನಡೆದಾಡುವ ವಿಶ್ವಕೋಶ
ನೀರಿಗಾಗಿ ಹಾಹಾಕಾರ
ಬಾಳೆಹಣ್ಣು ಸುಲಿದಷ್ಟೇ ಸುಲಭ
ಮೊದಲ ನೋಟದಲ್ಲೇ ಪ್ರೇಮ





Interesting! Would love to be disturbed.