ಸತೀಶ ಕುಲಕರ್ಣಿ ಕವಿತೆ – ಮಹಾತ್ಮ ಮತ್ತು ಆ ಹೆಣ್ಣು ಮಗಳು…

ಸತೀಶ ಕುಲಕರ್ಣಿ

ಅರ್ಧ ಮೈಮುಚ್ಚಿಗೆ
ಇನ್ನರ್ಧ ಗಾಳಿ ಬಿಸಿಲಿಗೆ
ಅಂದು ಆ ಬಾವಿ ಕಟ್ಟೆಯ ಮೇಲೆ ನಿಂತವಳ ಬಾಳು
ಇಂದೂ ಮಳೆ ಬಿಸಿಲು ತೋಳಿಗೆ

ಮಹಾತ್ಮನನ್ನು
ಅರ್ಧ ಸೀಳಿದ
ಆ ಹೆಣ್ಣು ಮಗಳು ಈಗ ಈಗೆಲ್ಲಿ ?

ಇಲ್ಲಿಯೇ
ಹರಕು ಉಡಿಯಲ್ಲಿ
ತಂಗಳೂಟವ ಕಟ್ಟಿಕೊಂಡು
ತಿರುಗುತ್ತಿರವಳೋ ಅವಳು ?

ಗುಡಿ ಗುಂಡಾರ, ಜೋಪಡಾ ಪಟ್ಟಿ
ಮಹಾನಗರ, ಮುನಸಿ ಪಾಲ್ಟಿ
ಫುಟ್ ಪಾತೋ, ಪ್ಲೈ ಓಹರೊ
ಎಲ್ಲೊ ಮಾನಮುಚ್ಚಲು ಅಡಗಿಕೊಂಡಿರವಳೊ ?

ಅಥವ
ಐಡಿ, ಆಧಾರ್, ರೇಷನ್ ಕಾರ್ಡುಗಳಿಗಾಗಿ
ಸೌಧ ಸೌಧಗಳ ಸುತ್ತುತ್ತಿರುವಳೊ ?

ಇಲ್ಲ,
ಸಾಕ್ಷಿಗಳಿಲ್ಲದೆ ಅತ್ಯಾಚಾರಕ್ಕೆ
ತಲೆಬಾಗಿ ಕಟಕಟೆಗಳಲ್ಲಿ ನಿಂತಿರುವಳೊ ?

ಅವಳು,
ಅಖಂಡ ಭಾರತದ
ಖಂಡ ಮಾಂಸಗಳಲಿ
ಕ್ವಾರಂಟೈನೊ, ಬ್ಯಾರಿಕೇಡುಗಳ
ಭೇದಿಸುತ್ತ ಅಂಡಲಿಯುತ್ತಿರುವಳೋ ?
ಈ ಜೀವಾತ್ಮ ಭರವಸೆಯ ಮಹಾಭಾರತದಲ್ಲಿ

‍ಲೇಖಕರು avadhi

February 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: