ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಬಂಧಗಳ ಸೆಲೆ ಎಳೆಎಳೆಯಾಗಿ ನಿರ್ಭಾವದ ಬಂಧಿಯಾದಾಗ…

ಸ್ನೇಹಾಂಕುರ

ನಾ ದಿವಾಕರ್


ಅವ್ಯಕ್ತ ವೇದನೆಗಳು
ಕೊರಳ ಚಿಪ್ಪುಗಳಲಿ ಹುದುಗಿ
ಅಂತರ್ಗತವಾದಾಗ
ಎತ್ತಲೋ ದೂರದಲೊಂದು
ಹೃದಯ ಮಿಡಿಯುತ್ತದೆ
ಮೌನದ ನೀರವತೆಯಲಿ !
 
ಮೌನ ಮಾತಾದಾಗ
ಆಂತರ್ಯದಲಡಗಿರುವ
ನೋವು ವಿರಮಿಸುತ್ತದೆ
ನಿರ್ಜನತೆಯ ಭಾವದಲಿ ;
ಸಂಬಂಧಗಳ ಸೆಲೆ
ಎಳೆಎಳೆಯಾಗಿ
ನಿರ್ಭಾವದ ಬಂಧಿಯಾದಾಗ
ಪ್ರೀತಿ ಪ್ರವಹಿಸುತ್ತದೆ !
 
ಸಂಕರದ ನೆರಳಲ್ಲಿ
ಸಾಂತ್ವನದ ಹೆಜ್ಜೆ ಗುರುತುಗಳು
ನವಿರಾಗಿ ಸಂಧಿಸುತ್ತವೆ
ವಾತ್ಸಲ್ಯದ ನೆಲೆಯಲ್ಲಿ ;
ನಲ್ಮೆಯ ಮನಸು
ಕದ ತಟ್ಟಿದಾಗ
ಪಲ್ಲವಿಸುತದೆ
ಸುಪ್ತ ಭಾವದ ಬಡಿತ!

‍ಲೇಖಕರು avadhi

25 June, 2013

3 Comments

  1. mmshaik

    nice..poem

  2. Manjula

    beautiful

  3. u s mahesh

    ಪದ್ಯಾಂಕುರ ..ಚನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading