ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾ ಹುನಗುಂಟಿಕರ್‌ಗೆ ‘ನಲ್ನುಡಿ’ ಪ್ರಶಸ್ತಿ

‘ನಲ್ನುಡಿ ಕಥಾಸ್ಪರ್ಧೆ- ೨೦೧೦
ಸಂಧ್ಯಾ ಹುನಗುಂಟಿಕರ್‌ಗೆ ಪ್ರಥಮ ಸ್ಥಾನ
ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ ಮಾಸಪತ್ರಿಕೆ ಕನ್ನಡ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ‘ನಲ್ನುಡಿ ಕಥಾಸ್ಪರ್ಧೆ-೨೦೧೦ರಲ್ಲಿ ಸಂಧ್ಯಾ ಹುನಗುಂಟಿಕರ್ ಅವರ ‘ಹಾರಲಾರದ ನೊಣ ಕಥೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಬ್ಬಾಸ್ ಮೇಲಿನಮನೆಯವರ ‘ಗಾಂಧಿ ಕಾಲನಿಯೂ ಮಂಜನೆಂಬ ಸ್ಲಂ ಬಾಲನೂ ಕಥೆ ದ್ವಿತೀಯ ಸ್ಥಾನವನ್ನೂ, ಶಂಕರ್ ರಾವ್ ಉಭಾಳೆಯವರ ‘ನಂಜಾದ ನಾಯಿ ಹಾಲು ಕಥೆ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.
ಸ್ಪರ್ಧೆಯಲ್ಲಿ ಪಾಲ್ಗೊಂಡ ಒಂದು ಸಾವಿರಕ್ಕೂ ಹೆಚ್ಚು ಕಥೆಗಳ ಪೈಕಿ ಹನ್ನೊಂದನ್ನು ಮೆಚ್ಚುಗೆ ಪಡೆದ ಕಥೆಗಳನ್ನಾಗಿ ಆರಿಸಲಾಗಿದೆ. ಡಾ.ಸೋಮಣ್ಣ ಹೊಂಗಳ್ಳಿಯವರ ‘ಫಕೀರಯ್ಯನೆಂಬ ಬುಂಡೇಬೆಸ್ತನೂ ನಕ್ಷತ್ರಾಕಾರದ ಚಿಪ್ಪಿನ ಆಮೆಯು, ಮಂಜುನಾಥ ಲತಾ ಅವರ ‘ಮೂಳೆ ಮಾಂಸ, ಡಾ. ಆನಂದ್ ಋಗ್ವೇದಿಯವರ ‘ಹೊತ್ತು ಮುಳುಗಿಸಿದ ಹೊತ್ತು, ಭವ್ಯ ಎಚ್.ಸಿ. ಅವರ ‘ಮಲ್ಲಿಗೆ, ವೈ.ಮಂಜುಳಾ (ಮಂಜುಳಾ ಮಾಧವ್) ಅವರ ಮಮತೆಯ ಒಡಲು, ಬೇಲೂರು ರಾಮಮೂರ್ತಿಯವರ ಕಸದಿಂದ ರಸ, ಹಣಮಂತ ಹಾಲಿಗೆರಿಯವರ ‘ಕತ್ತಲೊಳಗಡೆಯ ಮಿಣುಕು, ಮಹಾಬಲ ಸೀತಾಳಭಾವಿಯವರ ‘ಸ್ವಾಮಿಗಳು ಮಠದಲ್ಲಿಲ್ಲ, ಬಿ.ಟಿ.ರುಹುಲ್ಲಾ ಸಾಹೇಬರ ‘ಕಮರಿದ ಬದುಕು, ಕಲ್ಲೇಶ್ ಕುಂಬಾರ್‌ರವರ ‘ಅರಿವಿನ ಕೇಡು ಹಾಗು ವಿಶ್ವನಾಥ ಪಾಟೀಲ ಗೋನಾಳರವರ ‘ಅವರೆಲ್ಲ ಬಂದ ಮೇಲೆ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳಾಗಿವೆ.
ಪ್ರಥಮ ಬಹುಮಾನ ರೂ. ೨೫,೦೦೦, ದ್ವಿತೀಯ ಬಹುಮಾನ ರೂ. ೧೫,೦೦೦, ತೃತೀಯ ಬಹುಮಾನ ೧೦,೦೦೦ವಾಗಿರುತ್ತದೆ. ‘ಕರವೇ ನಲ್ನುಡಿ ಪತ್ರಿಕೆ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದಲ್ಲದೆ, ಎಲ್ಲ ಮೆಚ್ಚುಗೆ ಪಡೆದ ಕಥೆಗಾರರನ್ನು ಸನ್ಮಾನಿಸಲಾಗುವುದು.
ಹೆಸರಾಂತ ವಿಮರ್ಶಕ, ನಾಟಕಕಾರ ಡಾ.ರಾಜಪ್ಪ ದಳವಾಯಿ ಹಾಗು ಡಾ.ರವಿಕುಮಾರ್ ನೀಹ, ಎಲ್.ಎಂ.ಪ್ರದೀಪ್ ತೀರ್ಪುಗಾರರಾಗಿದ್ದರು. ಬಹುಮಾನಿತ ಕಥೆಗಳು ‘ಕರವೇ ನಲ್ನುಡಿ ವಿಶೇಷಾಂಕದಲ್ಲಿ ಪ್ರಕಟಗೊಂಡಿದ್ದು, ಮೆಚ್ಚುಗೆ ಪಡೆದ ಕಥೆಗಳು ‘ನಲ್ನುಡಿ ಮಾಸಿಕದಲ್ಲಿ ಪ್ರತಿ ತಿಂಗಳಿಗೊಂದರಂತೆ ಪ್ರಕಟಗೊಳ್ಳಲಿವೆ.

‍ಲೇಖಕರು avadhi

2 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

4 Comments

  1. jahnavi butty

    abhnandanegalu!

  2. prakashchandra

    vijetharige abhinandanegalu.

  3. Vithal Dalawai

    Congrats to all

  4. r t sharan

    Smt. Sandhya avarige hruthpoorvaka abhinandanegaLu. Hydrabaad karnaataka saahitya lokakke mattondu hemmeya prashasti tandha Sandhya inno hechchu hechchu prashastigalannu tamma mudigerisali endu haaraisuve.

    R T SHARAN

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading