ಸಂಘಮಿತ್ರೆ ನಾಗರಘಟ್ಟ
ಎಲ್ಲವನ್ನು ಅಮೂರ್ತವಾಗೇ
ಕಾಣುವ ನನ್ನ ನೋಟ
ನಿಮಗೆ ಅಪಾಯ-ಅಸಹ್ಯ
ಎಂದನಿಸಿದಾಗ ನಾನು ನಿಮ್ಮ
ಮುಂದೆ ತೆರೆದ ಪೆಟ್ಟಿಗೆ
ಇಡುವೆ ಅಲ್ಲಿ ನಿಮ್ಮ
ಅಸೂಯೆ-ಆರೋಪ
ಎಲ್ಲವನ್ನೂ ಒಗೆಯಿರಿ
ಮುಚ್ಚಳದ ಸಮೇತ
ನಿಮ್ಮ ವ್ಯಕ್ತಿತ್ವದ
ಪ್ರದರ್ಶನವನ್ನೇ ನಿಮ್ಮ
ಕೈಗೆ ನೀಡುವೆ
ಎಂದಿಗೂ ಅದನ್ನು
ತೆರೆಯಬೇಡಿ ತೆರೆದರೂ
ಅದರೊಳಗಿನ ನಿಮ್ಮ
ಎಲ್ಲವೂ ನಿಮ್ಮ ಕಣ್ಣುಗಳಿಗೆ
ರಾಚುತ್ತವೆ ಕಾಡುತ್ತವೆ

ಎಂದಾದರೊಂದು ದಿನ
ನನ್ನ ಹಾಡಿಗೂ ತಲೆದೂಗಿ
ನನ್ನ ರೇಖೆಗೆ ಬಣ್ಣ ತುಂಬಿರಿ
ನನ್ನೀ ಹಾಡು- ಗೆರೆಗಳು ನಿಮಗಾಗೆ
ಉಲಿಯುತ್ತವೆ..ಆಗ ನಾನೂ
ನಿಮ್ಮಂಥೆ ಆಗಸ ನೀಲಿಯಾಗೆ ಇದೆ
ನೀರಿಗೆ ಬಣ್ಣವೇ ಇಲ್ಲ
ಗಾಳಿಗೆ ರೂಪವಿಲ್ಲ ಎಂಬೆಲ್ಲಾ
ನಗ್ನ ಸತ್ಯಗಳ ನಂಬುವೆ
ಕಲ್ಪನೆಗಳ ಮೀರಿ ವಾಸ್ತವದಲ್ಲಿ
ಬದುಕುವೆ..ನಾನು ಮಾದರಿಯಾಗುವೆ..






0 Comments