ಸಂಘಮಿತ್ರೆ ನಾಗರಘಟ್ಟ​​ ಹೊಸ ಕವಿತೆ- ಅಸ್ಪೃಶ್ಯ ಶವ

ಸಂಘಮಿತ್ರೆ ನಾಗರಘಟ್ಟ

ಎಷ್ಟೇ ಕಾಲ ಮಾಸಿದರು
ನಿಮ್ಮ‌ ಮನದ ಕೊಳೆ ಮಾತ್ರ
ಹಾಗೇ ಉಳಿದಿದೆ-
ಅಳಿಸಲಾಗದ ಬರೆಯಂತೆ
ಅದನ್ನು ಉಜ್ಜಿ ಉಜ್ಜಿ ತೊಳೆದಷ್ಟು
ಹೊಳಪು ಹೆಚ್ಚಾಗುತ್ತಿದೆ…
ಪಾಪದ ಮಕ್ಕಳು
ಕಣ್ ಅರಳಿಸಿ ನಿಮ್ಮತ್ತ ನೋಡುತ್ತಿದ್ದರೆ..
ನೀವು ಅವುಗಳತ್ತ ಒಮ್ಮೆ ಎಸೆವ ಬಿಸ್ಕತ್ತು
ಅವರ ಕ್ಷಣದ ಹಸಿವ ನೀಗಿಸಬಹುದು
ಆ ಕೃತಜ್ಞತೆಯ ಕುರುಹಿಗೆ ಅವು
ನಿಮಗೆ ಕೈಮುಗಿದು, ಕಂಬನಿಗರೆಯಬಹುದು
ನೀವು ಉಬ್ಬಿ ಹೋಗಲೂಬಹುದು…

ಮತ್ತೊಂದು ದಿನ ಅದೇ ಮಕ್ಕಳು
ಬೀದಿ ಬದಿಯಲಿ ಕೈ ಚಾಚುತ ನಿಂತಾಗ
ನೀವು ಅವರ ಗಮನಿಸಿಯೂ-
ಗಮನಿಸದ ಹಾಗೆ ಬಿರುಸಿನಲಿ ಸಾಗಬಹುದು
ಹಾದಿಯಲಿ ನಡೆಯುವಾಗ ಕಾಲ್ ಜಾರಿ
ಧೊಪ್ ಎಂದು ಬೀಳಲೂಬಹುದು…
ಬಿದ್ದಾಗ – ‘ಅಮ್ಮಾ’ ಎನ್ನಲೂ ಬಹದು
ಆಗ ಆ ಮಕ್ಕಳು ನಿಮ್ಮತ್ತ ಧಾವಿಸಿ
ಬಂದಾಗ… ನೀವು ಮೇಲೇಳಲು ಕೈ ನೀಡುವ
ಬದಲು ಮುಟ್ಟಿಸಿಕೊಳ್ಳದೆ ದೂರ ಉಳಿಯುತ್ತೀರಿ-
ಸ್ಪರ್ಶ‌ ಬಯಸದೆ ನೀವುಗಳೇ ಅಸ್ಪೃಶ್ಯ ಶವವಾಗಿಬಿಡುತ್ತೀರಿ…

‍ಲೇಖಕರು Avadhi

April 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: