ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಷರೀಫ್” ರಿಗೊ೦ದು ಪತ್ರ…

– ಸಿದ್ದು ದೇವರಮನಿ
asjpg1
ಆ ಊರಲ್ಲಿ ಯುದ್ದ ಜಾರಿಯಲ್ಲಿದೆ
ಜಾತಿಯ ದುರಾಭಿಮಾನದಿ೦ದ
ಸಾಮರಸ್ಯದ ಸಾವಿನಿ೦ದ
ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ
ಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ
ಬರೀ ಬಾ೦ಬು ಹೊಗೆಯೆದ್ದು  ಬಾನಿಗೆ ಪುಟಿದೇಳುತ್ತಿದೆ
ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ
ಕಾರಣ
ಮನ-ಮನಸುಗಳ  ಪ್ರೀತಿ  ಬಿರುಕಲ್ಲಿ ಬತ್ತಿದಕ್ಕೆ.
ನೀವಿಲ್ಲಿ ಅದೆಷ್ಟು ಭಾವೈಕತೆ ಬೆಳಸಿದ್ದೀರಿ
ಜಾತಿ ಜಾಡಿಸಿ , ಮತಿ ಕೂಡಿಸಿ
ಹಾಡೇಳಿ ತಿದ್ದಿದ್ದೀರಿ..
ಬ೦ದಾಗಿನಿ೦ದ ನಿಮ್ಮ ಬಳಿಗೆ ಬರುತ್ತೇನೆ
ಸಮಾಧಿಯಲ್ಲಿ ತಾವು ಮಲಗಿದ್ದೀರಿ
ಎಬ್ಬಿಸಲು ಕಳವಳಿಸುತ್ತೇನೆ.
ಹೇಳಿ, ಬರಲಿ ಯಾವಾಗ ?
ನಿಮ್ಮೊ೦ದಿಗೆ ಮತಾಡುವುದಿದೆ..
ಸ್ವಲ್ಪ ದಿನ ಬಿಟ್ಟು ಬರುತ್ತೇನೆ
ರೆಡಿಯಾಗಿರಿ,  ಹೋಗಿಬರುವ
ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ.

‍ಲೇಖಕರು avadhi

3 December, 2008

5 Comments

  1. greeshma

    “ಅಬ್ಬರಿಸುವ ಕೋವಿಗೆ ಜೀವದ ಹಂಗೆಲ್ಲಿ ಗೆಳೆಯ. . ” -ಸಾಲುಗಳು ತುಂಬ
    ಚೆನ್ನಾಗಿವೆ. ಕವನ ತುಂಬ ಹೊತ್ತು ಕಾಡುತ್ತದೆ . .

  2. ಡಿ.ಎಸ್.ರಾಮಸ್ವಾಮಿ

    ಷರೀಫ, ಗಾಂಧಿ, ಬಸವ ಅಷ್ಟೇಕೆ ಅಲ್ಲಾ ಗೊತ್ತಿದ್ದಿದ್ದರೆ ಇಂಥದೆಲ್ಲ ನಡೆಯುತ್ತಲೇ ಇರಲಿಲ್ಲ. ವರ್ತಮಾನದ ಸಂಕಟ ಪದ್ಯವಾಗಿ ಹೊರಬಂದು ಎಲ್ಲರ ನೋವನ್ನೂ ಧ್ವನಿಸುತ್ತಿದೆ.

  3. tumkurnaveed

    ರೆಡಿಯಾಗಿರಿ, ಹೋಗಿಬರುವ
    ಹುಟ್ಟುಹಾಕಲು ಪ್ರೀತಿ
    ಬರಡಾದ ಬಿರುಕು ಬೆಲೆಯ ಬದುಕಿಗೆ.
    -siddu, it’s really moving-hrudayakke taakide.
    inthaha kavithegala matthashtu niriksheyide.

  4. anand rugvedi

    siddu kaviteyannu odiddu santasa aste tallana. phone nalli sigada e huduga, kotturina automobile shop nalli kaledu hodava ega blognalli midisuvudu achchari

  5. kaligananath gudadur

    Nija ‘ಹುಟ್ಟುಹಾಕಲು ಪ್ರೀತಿ
    ಬರಡಾದ ಬಿರುಕು ಬೆಲೆಯ ಬದುಕಿಗೆ… navella siddhavagabekide.
    kaligananath gudadur

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading