ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಷರೀಫರಿಗೊ೦ದು ಪತ್ರ..

siddu devaramani

ಸಿದ್ದು ದೇವರಮನಿ

ಆ ಊರಲ್ಲಿ ಯುದ್ದ ಜಾರಿಯಲ್ಲಿದೆ
ಜಾತಿಯ ದುರಾಭಿಮಾನದಿ೦ದ
ಸಾಮರಸ್ಯದ ಸಾವಿನಿ೦ದ
ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ
fireಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ
ಬರೀ ಬಾ೦ಬು ಹೊಗೆಯೆದ್ದು  ಬಾನಿಗೆ ಪುಟಿದೇಳುತ್ತಿದೆ
ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ
ಕಾರಣ
ಮನ-ಮನಸುಗಳ  ಪ್ರೀತಿ  ಬಿರುಕಲ್ಲಿ ಬತ್ತಿದಕ್ಕೆ.

ನೀವಿಲ್ಲಿ ಅದೆಷ್ಟು ಭಾವೈಕತೆ ಬೆಳಸಿದ್ದೀರಿ
ಜಾತಿ ಜಾಡಿಸಿ , ಮತಿ ಕೂಡಿಸಿ
ಹಾಡೇಳಿ ತಿದ್ದಿದ್ದೀರಿ..

ಬ೦ದಾಗಿನಿ೦ದ ನಿಮ್ಮ ಬಳಿಗೆ ಬರುತ್ತೇನೆ
ಸಮಾಧಿಯಲ್ಲಿ ತಾವು ಮಲಗಿದ್ದೀರಿ
ಎಬ್ಬಿಸಲು ಕಳವಳಿಸುತ್ತೇನೆ.
ಹೇಳಿ, ಬರಲಿ ಯಾವಾಗ ?
ನಿಮ್ಮೊ೦ದಿಗೆ ಮತಾಡುವುದಿದೆ..
ಸ್ವಲ್ಪ ದಿನ ಬಿಟ್ಟು ಬರುತ್ತೇನೆ
ರೆಡಿಯಾಗಿರಿ,  ಹೋಗಿಬರುವ
ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ.

‍ಲೇಖಕರು admin

21 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading