ಶ್ರೀನಿಧಿ ಡಿ ಎಸ್
ಕಾಲು ಕಾಯುವ ಪಾದರಕ್ಷೆ
ತಿಳಿಸುತ್ತದೆ ನಡೆದು
ಬಂದ ದಾರಿ
ಬೇಡದ ಭೂತಕ್ಕೆ ಹೇಳಿ ವಿದಾಯ
ಓಡಿದರೆ ಕಾಣುವುದು
ವಿಸ್ತಾರ ಹೆದ್ದಾರಿ
.
ಜೀವನ ಮಿಠಾಯಿ ಡಬ್ಬ
ಸಿಕ್ಕೀತು ಒಂದಲ್ಲ ಒಂದು
ಸಿಹಿ,
ತೆರೆದರೆ ಮುಚ್ಚಳ
.
ಸುಮ್ಮನೆ ಸಂತೈಸಿದರೆ ಸಿಗುವ
ಶಾಂತಿಗೆ
ಉದ್ದೇಶವಿಲ್ಲದ ಸಹಾಯಕ್ಕೆ
ಸಿಡುಕಿನ ಮುಖಕ್ಕೆ ದೊರಕುವ
ಕಿರುನಗೆಯ ಉತ್ತರಕ್ಕೆ
ಇಲ್ಲ ಯಾವ ನಿಘಂಟಿನಲ್ಲೂ ಅರ್ಥ
.
ಕಲಿತುಕೊಳ್ಳುತ್ತ ಹೋದರೆ
ಒಂದರ ನಂತರ
ಮತ್ತೊಂದ
ಕಾಣುವುದು ಹೊಳೆವ ತಾರೆಗಳ
ಹೊಸ ಆಕಾಶ
.
ಜೀವಯಾನ, ಎಲ್ಲ ಸಿದ್ಧತೆಗಳ
ನಂತರದ ಪಯಣ
ಅಥವ, ಸುಮ್ಮಗೆ
ಬೀಸಿದ ಗಾಳಿಗೆ ಹಾರಿದ ಪುಕ್ಕ
.
ಕೊನೆಗುಳಿಯುವುದು ಮಾತ್ರ
ದಕ್ಕಿದ
ನೆಮ್ಮದಿಗಳ ಲೆಕ್ಕ







nice poem!!!
ಚೆನ್ನಾಗಿದೆ ಕವನ, 3 ನೇ ಪ್ಯಾರಾ ತುಂಬ ಇಷ್ಟ ಆಯ್ತು. ಕವನದಲ್ಲಿರೋ positive energy ಓದಕ್ಕೆ ಖುಷಿ ಕೊಡತ್ತೆ.
Thankz avadhi!
Savitri and ಶ್ವೇತಾ- dhanyavadagaLu..