ಶ್ರೀಧರ ಪತ್ತಾರ
ನಿಂತ ನೆಲವು ನನ್ನದಲ್ಲ
ನಿಜದ ನೆಲೆಯಲಿ
ಎದೆಯಲುಳಿದ ಕವಿತೆಗೆ
ಉಲಿಯದ ಮಾತಿಗೆ
ಸ್ವರದ ಹಂಗಿಲ್ಲ..
ಮಾರ್ದನಿಸಿದೆ ಧ್ವನಿ
ಅಂತರಂಗದ ಅರಿಕೆಗೆ
ಸತ್ಯದ ನಿಲುವಿದೆ
ನನ್ನಿರುವ ಸಾಕ್ಷಿಗೆ…

ಆಸೆಯ ಕಂಗಳಿಗೆ
ಸೊಬಗಿನ ಹಸಿರ ಹಂಗು
ಹರಿವ ಭಾವಲಹರಿಗೆ
ಮನದ ಆಸರೆಯಿದೆ…
ಉದಿಸುವ ಕಲ್ಪನೆಗಳಿಗೆ
ಅನಂತ ಎಲ್ಲೆ…
ಬಯಲು ಆಲಯದೊಳು
ಬದುಕು ಲೀನವಾಗಿದೆ…
ಮೌನಧ್ಯಾನದ ಹಿತವಿದೆ
ಕಣ್ಣ ಕುಸಿಕೆಯಲಿ…
ಕತ್ತಲೆಗೆ ಮರೆವಿದೆ
ಬೆಳಕ ಬಿಂಬದಲಿ






0 Comments