ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಗೌರವ ಕಾವ್ಯ ಸ್ಪರ್ಧೆ
‘ಶೂದ್ರ’ ಸಾಹಿತ್ಯಕ ಪತ್ರಿಕೆಯು ಕೆಲವು ವರ್ಷಗಳಿಂದ ಕಾವ್ಯರಚನೆಯನ್ನು ಉತ್ತೇಜಿಸುವುದಕ್ಕಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಹೆಸರಿನಲ್ಲಿ ಗೌರವ ಕಾವ್ಯಸ್ಪರ್ಧೆಯನ್ನು ನಡೆಸುತ್ತ ಬಂದಿದೆ. ಈ ಬಾರಿಯ ಈ ಕಾವ್ಯಸ್ಪರ್ಧೆಗೆ 2008 ಮತ್ತು 2009ನೇ ಸಾಲಿನ ಕವನಸಂಕಲನಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿ ಪತ್ರದ ಜೊತೆಗೆ ಪ್ರಶಸ್ತಿಯ ಮೊತ್ತ ಹದಿನೈದು ಸಾವಿರ ರೂ.ಗಳು (ರೂ. 15,000/-). ದಯವಿಟ್ಟು ಕಾವ್ಯಾಸಕ್ತರು ತಮ್ಮ ಸಂಕಲನದ ಮೂರು ಪ್ರತಿಗಳನ್ನು ಆಗಸ್ಟ್ 20ರೊಳಗೆ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಬೇಕಾಗಿ ವಿನಂತಿ. ನಿಮ್ಮ, ಶೂದ್ರ ಶ್ರೀನಿವಾಸ್ ವಿಳಾಸ ಶೂದ್ರ ಶ್ರೀನಿವಾಸ್ ‘ಕಾವಿಮನೆ’, ಮಾನಸ ವಿದ್ಯಾಕೇಂದ್ರ ಅಣ್ಣಯ್ಯರೆಡ್ಡಿ ಬಡಾವಣೆ, ಜೆ.ಪಿ.ನಗರ 6ನೇ ಹಂತ ಬೆಂಗಳೂರು – 560 078. ದೂರವಾಣಿ : 22451762 / 9341234456]]>'ಶೂದ್ರ' ದಿ೦ದ ಕಾವ್ಯಸ್ಪರ್ಧೆ
ನಿಮಗೆ ಇವೂ ಇಷ್ಟವಾಗಬಹುದು…






0 Comments