ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶವದ ಜೊತೆ ಹೆಸರೂ ಮಣ್ಣಾಗುವುದು…..

ಹೆಸರಲ್ಲೇನಿದೆ ಹೇಳು? ನಮ್ಮದಲ್ಲದ್ದು!

– ನಾಗೇಂದ್ರ ಕುಮಾರ್ ಕೆ ಎಸ್

ಹುಟ್ಟಿದ ಮೇಲೆ ಜೀವಕ್ಕೊಂದು ಗುರುತು ಪತ್ರದಂತೆ;
ಪ್ರೀತಿಯಿಂದಲೋ? ಯಾರ ನೆನಪಿನಿಂದಲೋ? ಗೊಣಗಿದಂತೆ,
ದೂರದ ಅದಾವುದೋ ಕಾಣದ ತರಂಗಗಳಂತೆ,
ಬೇಸಿಗೆಯ ನೀರವ ರಾತ್ರಿಯ ಪೇಲವ ಉಸಿರಾಟದಂತೆ,
ಬಾಳ ಬಂಡಿಯ ಪಯಣದಲ್ಲಿ ಬದುಕಲು ಟಿಕೇಟು-ಹೆಸರು|| 
ಕಾಗದದ ಮೇಲೆ ಬರೆದ ಹೆಸರು ಎಂದೋ ಅಂದಗೆಟ್ಟಿದೆ
ಅಸ್ಪಷ್ಟವಾಗಿ,ನಿಗೂಡವಾಗಿ ಏನನ್ನೂ ಹೇಳುತ್ತಿದೆ,
ಸಮಾದಿಯ ಮೇಲೆ ಕೆತ್ತಿದ ಪದಗಳ ಕುರುಹು,ಸ್ಮಾರಕದಂತೆ,
ಸತ್ತ ಹಾಗು ಗತಕಾಲದ ಕಳೆದುಹೋದ ನಿಧಿಯಂತೆ,
ನಮ್ಮ ಹಿರಿಕರ,ಸಂಸ್ಕೃತಿಯ,ಭಾಷೆಯ ಮೇಲಿನ ಋಣದಂತೆ,
ನಮ್ಮ ಹೆಸರ ಮೇಲೆ ಪ್ರೀತಿ ಹೆಚ್ಚು ನಮಗೆ||

ಏನಿದೆ ಹೇಳು ಹೆಸರಲ್ಲಿ? ಮರೆತು ಹೋಗಿದೆ ಬಹಳ ದಿನಗಳಾಗಿ,
ಬಿರುಗಾಳಿಯ ಆವೇಗ ಹಳತನ್ನು ಅಳಿಸಿಹಾಕಿದೆ,ನೆಟ್ಟು ಹೊಸತನ್ನು,
ಅದರೂ ನನ್ನದೆಂಬ ಭ್ರಮೆ,ಪ್ರೀತಿ ನಮ್ಮನ್ನೆಂದೂ ತೊರೆಯದು
ಹೆಸರಲ್ಲೇನಿದೆ ಎಂಬ ಹುಡುಕಾಟದ ಸಿಹಿಭಾವ ಜೀವ ಹಿಡಿದಿದೆ;
ಯಾರೋ ಹೆಸರು ಕರೆದಾಗ ನಮ್ಮನ್ನೇ ಕರೆದರೆಂಬ ವಾಂಛೆ ಏಕೋ?
ಹೆಸರೇಕೆ ನಮ್ಮನ್ನು ಅಷ್ಟು ಬಲವಾಗಿ ಅಪ್ಪಿಹುದೋ?||
ಜೀವ ತೊರೆವಾಗ ಆ ಕ್ಷಣದ ನರಳಾಟ
ಹೆಸರಿಗಾವ ನರಳಾಟವಿಲ್ಲ,ನಗುವಿಲ್ಲ-ನಿರ್ಲಿಪ್ತ;
ಕಾಗದದ ಮೇಲೆ ನಲಿವುದು ಹೊಸ ಲೇಖನಿಯಿಂದ;
ಆಸ್ಪತ್ರೆಯ ಮಂಚದಲ್ಲಿ ಮಲಗಿರಲಿ ನರಳುತ್ತಾ
ಎಲ್ಲರೂ ಕೇಳುವರು ವೈದ್ಯರ, ಹೆಸರ ಮರೆತು
” ರೋಗಿ ಹೇಗಿದ್ದಾನೆ? ಬದುಕುಳಿವ ಸಾಧ್ಯತೆ ಏನು?”
ಜೀವ ಇರುವವರೆಗೂ ಈ ಹೆಸರಿನ ಅಡ್ಡಪಟ್ಟಿ ನಮಗೆ
ಜೀವ ಹೋದ ಮೇಲೆ ಬರೀ ಶವ,ಬರೀ ಶವವಷ್ಟೆ ನಾವು
ಶವದ ಜೊತೆ ಹೆಸರೂ ಮಣ್ಣಾಗುವುದು…..
ಪಯಣ ಮುಗಿದ ಮೇಲೆ ಟಿಕೇಟನ್ನು ಯಾರೂ ಜೋಪಾನ ಮಾಡರು||

 

‍ಲೇಖಕರು avadhi

28 January, 2014

1 Comment

  1. mmshaik

    kone saalu pade pade odide..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading