ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಂಕರಾನಂದ ಹೆಬ್ಬಾಳ ಕವಿತೆ – ಪ್ರೀತಿಯೊಂದು ಮೋಹವೆಂದು…

ಶಂಕರಾನಂದ ಹೆಬ್ಬಾಳ

ಮೊದಲೆ ಹೇಳಿಬಿಡಬೇಕಿತ್ತು ಇದೊಂದು ನಾಟಕವೆಂದು
ಹೃದಯ ತಿಳಿಯಬೇಕಿತ್ತು ಪ್ರೀತಿಯೊಂದು ಮೋಹವೆಂದು

ತುಟಿಗಳು ಕಂಪಿಸದೆ ದಿಗಿಲು ಬಡಿದು ಕುಳಿತಿವೆಯೇಕೆ
ನುಡಿಯ ಅರಿಯಬೇಕಿತ್ತು ಸದರವೊಂದು ಕಾರಣವೆಂದು

ಗೋಪುರ ಗಂಟೆಯಂತೆ ಘೋಷಧ್ವನಿ ಮೊಳಗಿತೇಕೆ
ಕಂಗಳು ನಂಬಬೇಕಿತ್ತು ಕಾಣುವುದು ಮುಖವಾಡವೆಂದು

ವಿಶ್ವಾಸದ ನೆಪದಲ್ಲಿ ಕೃತಘ್ನತೆಯನ್ನು ಮೆರೆವೆಯಲ್ಲ
ಬಂಧವನು ತೊರೆಯಬೇಕಿತ್ತು ಸುಖವು ಇನ್ನಿಲ್ಲವೆಂದು

ಭಾವಗುಚ್ಚದಲಿ ಅಭಿನವನ ಕುಸುಮವಿದು ಬಾಡಲಿಲ್ಲ
ಮೌನವು ಬೆರೆಯಬೇಕಿತ್ತು ಜೀವವದು ತಾನಿಲ್ಲವೆಂದು

‍ಲೇಖಕರು Admin

24 November, 2022

1 Comment

  1. prathibha nandakumar

    ತುಂಬ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading