ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈದೇಹಿ ಯಾಕೆ ಆಪ್ತರಾಗುತ್ತಾರೆ..?

ವೈದೇಹಿ ಯಾಕೆ ಆಪ್ತರಾಗುತ್ತಾರೆ ಎಂದು ಒರೆಗೆ ಹಚ್ಚುವ ಲೇಖನ ಇಲ್ಲಿದೆ.

ವೈದೇಹಿ ಕಥೆಗಳನ್ನು ಇಂಗ್ಲಿಷ್ ಅಂಗಳಕ್ಕೆ ನಡೆಸಿಕೊಂಡು ಹೋಗಿರುವ ಬಾಗೇಶ್ರೀ ಬರೆದಿದ್ದಾರೆ. ಓದಿ-

ವೈದೇಹಿಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ತುಂಬಾ ಖುಶಿ. ಅವರು ನಮ್ಮೂರವರು ಅಂತ ಸ್ವಲ್ಪ extra ಖುಶಿ. ಅವರ best ಕಥೆಗಳಲ್ಲಿ ಗಾಢವಾಗಿರುವುದು ದ.ಕ.ದ ಮಣ್ಣಿನ ವಾಸನೆಯೇ ಆದರೂ ಅವರು ಸುಮಾರು ವರ್ಷ ಶಿವಮೊಗ್ಗದಲ್ಲಿ  ಇದ್ದದ್ದರಿಂದ ನಮ್ಮೂರವರು ಅಂತಲೂ ಅಂದುಕೊಂಡರೆ factually incorrect ಅಂತೂ ಅಲ್ಲ. (ಈಗ ನಾವು ಸುನಿತಾ ವಿಲಿಯಮ್ಸ್ ನಮ್ಮ ದೇಶದವಳು ಅಂತ ಜಂಬ ಪಟ್ಟುಕೊಳ್ಳುವುದಿಲ್ಲವಾ, ಹಾಗೆ!)

ಮುಂಚಿನಿಂದಲೂ ವೈದೇಹಿ ಕತೆಗಳ ಬಗ್ಗೆ ನನಗೆ ವಿಶೇಷ ಆಕರ್ಷಣೆ. ಮ್ಯಾಗಜೀನುಗಳ ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ, ಲಂಕೇಶ್ ಪತ್ರಿಕೆಯಲ್ಲಿ ಪ್ರಕಟ ಆಗುತ್ತಿದ್ದ ಕತೆಗಳನ್ನು ಕಾದು ಓದುತ್ತಿದ್ದೆ. ಪ್ರತಿ ಓದುಗನಿ/ಳಿಗೂ ಇಷ್ಟ ಅನ್ನಿಸುವ ಹತ್ತಿಪ್ಪತ್ತು ಬರಹಗಾರರಿರಬಹುದು. ಆದರೆ ತುಂಬ ಆಪ್ತ ಅನ್ನಿಸುವ, ಮನಸ್ಸನ್ನು ತಟ್ಟುವ ಅಥವಾ ‘ವಾವ್’ ಅನ್ನಿಸಿ ಮೈ ನಿಮಿರೇಳಿಸುವ ಬರಹಗಾರರು ಕೆಲವರೇ. ನನ್ನ ಮಟ್ಟಿಗೆ ವೈದೇಹಿ ಆಪ್ತ ಅನ್ನಿಸುವ categoryಗೆ ಸೇರಿದವರು. ನೆರುಡಾನ “I want to do with you what spring does with the cherry trees” ಥರದ ಸಾಲುಗಳು, ಜಯಂತ್ ಕಾಯ್ಕಿಣಿಯ ಗದ್ಯದ ಕೆಲ ಪದ್ಯದಂತ turns of phrase, ದೇವನೂರರ magical ಅನ್ನಿಸುವ ಭಾಷೆಯ ಓಘ  ‘ವಾವ್’ ಅನ್ನಿಸುವ categoryಯವು.

ಹೀಗೆ ಕೆಲವರು ಮಾತ್ರ ಯಾಕೆ ಆಪ್ತ ಆಗುತ್ತಾರೆ ಅಥವ ಯಾಕೆ ನಮ್ಮಲ್ಲಿ ‘ವಾವ್’ ಅನ್ನುವ ಉದ್ಗಾರ ಹುಟ್ಟಿಸುತ್ತಾರೆ? ಈ ಬಗೆಯ ಜಿಜ್ನಾಸೆಯೇ ಒಂದು ಅರ್ಥದಲ್ಲಿ  ಆಪ್ತತೆ ಅನ್ನುವ conceptಗೆ, ಮೈ ನಿಮಿರೇಳುವ ಅನುಭವಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಹೊರಡುವ ಪಯಣ ಅನ್ನಿಸಬಹುದು. ಆದರೆ “ಇಷ್ಟ “, “ಆಪ್ತ” ಹೀಗೆ ಸುಮ್ಮ ಸುಮ್ಮನೆ ಒಂದೊಂದು ಪದಗಳನ್ನು ಹಾಗೆ ಒಗೆದು ಸುಮ್ಮನಿದ್ದುಬಿಡುವುದು ಪದ್ಯ, ಗದ್ಯ ಯಾವುದನ್ನೂ ಬಗೆವ ಬಗೆಯೇ ಅಲ್ಲ ಅಂತ ಮೊದಲ ಸಾಹಿತ್ಯದ ಪಾಠ ಹೇಳಿಕೊಟ್ಟ ನಮ್ಮ ಮನು ಚಕ್ರವರ್ತಿ ಮೇಷ್ಟ್ರನ್ನು ನೆನೆದು ವೈದೇಹಿ ಯಾಕೆ ನನಗೆ ಆಪ್ತ ಅನ್ನುವ ಪ್ರಶ್ನೆಯನ್ನು ಬಹಳ belated ಆಗಿ ಕೇಳಿಕೊಳ್ಳುತ್ತಿದ್ದೇನೆ.

ಪೂರ್ಣ ಓದಿಗೆ : ಬಾಗೇಶ್ರೀ

‍ಲೇಖಕರು avadhi

31 October, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. Prasad Raxidi

    vaidehi yaake aptharagtare andre avrobbaru amma, avarolage innoo obbaru amma iddale !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading