ವಿನಯಾ ವಕ್ಕುಂದ ಅವರ ‘ಅನುದಿನದ ದಂದುಗ’ ಕೃತಿಗೆ ೨೦೧೮ನೇ ಸಾಲಿನ ಕನ್ನಡದ ಕೂಲಿ ರಾಮಜಾಧವ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ೧೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯು ಪ್ರತಿ ವರ್ಷ ನಾಡು ನುಡಿ ನೆಲ ಜಲ ಕುರಿತಾದ ಚಿಂತನಾ ಬರಹಕ್ಕೆ ಈ ಪ್ರಶಸ್ತಿಯನ್ನು ನೀಡುತ್ತದೆ.
ಈ ತಿಂಗಳ ೩೦ ರಂದು ಕರ್ನಾಟಕ ವಿದ್ಯಾ ವರ್ಧಕ ಸಂಘದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭವು ನಡೆಯಲಿದೆ.
0 ಪ್ರತಿಕ್ರಿಯೆಗಳು