ವಿದ್ಯಾ
ಸಂಬಂಧಗಳು ಬರೀ ಸಂಬಂಧಗಳಷ್ಟೇ
ಕೆಲವು ಒಂದು ಕ್ಷಣದ್ದು
ಕೆಲವು ಎರಡು ಕ್ಷಣಗಳದ್ದು..
ಕೆಲವು ಗರಿಗಳಿಗಿಂತ ಹಗುರ
ವರ್ಷಗಳಡಿಯಲ್ಲಿ ನಡೆಯುತ್ತ
ಭಾರವಾಗಿ-ತೂಕದ್ದಾಗಿಬಿಡುತ್ತವೆ
ಭಾರೀ ತೂಕದ ಮಂಜುಗಡ್ಡೆಗಳಂಥವು
ಹಗುರವಾಗಿಬಿಡುತ್ತವೆ
ವರ್ಷಗಳು ಕಳೆದಂತೆ
ಹೆಸರಿರುವ ಸಂಬಂಧಗಳು
ಹೆಸರಿಗಷ್ಟೇ ಇರುವ ಸಂಬಂಧಗಳು
ಸತ್ತ ಮೇಲೂ ಹೆಸರಿನ ಮೇಲೆ
ಬದುಕುಳಿವ ಸಂಬಂಧಗಳು..ಹೀಗೆ..
ಹೆಸರಿನಿಂದಷ್ಟೇ ಬದುಕಬೇಕಾಗುತ್ತದೆ..
ಸಂಬಂಧಗಳು ಬರೀ ಸಂಬಂಧಗಳಷ್ಟೆ..
ಮೂಲ-ಗುಲ್ಜಾರ್ 2
ಕೆಲವು ಒಂದು ಕ್ಷಣದ್ದು
ಕೆಲವು ಎರಡು ಕ್ಷಣಗಳದ್ದು..
ಕೆಲವು ಗರಿಗಳಿಗಿಂತ ಹಗುರ
ವರ್ಷಗಳಡಿಯಲ್ಲಿ ನಡೆಯುತ್ತ
ಭಾರವಾಗಿ-ತೂಕದ್ದಾಗಿಬಿಡುತ್ತವೆ
ಭಾರೀ ತೂಕದ ಮಂಜುಗಡ್ಡೆಗಳಂಥವು
ಹಗುರವಾಗಿಬಿಡುತ್ತವೆ
ವರ್ಷಗಳು ಕಳೆದಂತೆ
ಹೆಸರಿರುವ ಸಂಬಂಧಗಳು
ಹೆಸರಿಗಷ್ಟೇ ಇರುವ ಸಂಬಂಧಗಳು
ಸತ್ತ ಮೇಲೂ ಹೆಸರಿನ ಮೇಲೆ
ಬದುಕುಳಿವ ಸಂಬಂಧಗಳು..ಹೀಗೆ..
ಹೆಸರಿನಿಂದಷ್ಟೇ ಬದುಕಬೇಕಾಗುತ್ತದೆ..
ಸಂಬಂಧಗಳು ಬರೀ ಸಂಬಂಧಗಳಷ್ಟೆ..
ಮೂಲ-ಗುಲ್ಜಾರ್ 2
ಚೌಕದಿಂದ ಹೊರಟು,
ಮಂಡಿ, ಬಾಜಾರುಗಳಿಂದ ಹಾದು
ಕೆಂಪು ಗಲ್ಲಿಯಿಂದ ಸಾಗುತ್ತಿದೆ ಒಂದು ಕಾಗದದ ದೋಣಿ
ಮಳೆಯ ಅನಾಥ ನೀರಿನ ಮೇಲೆ ಕೂತು
ಶಹರದ ಅಲೆಮಾರಿ ಬೀದಿಗಳನ್ನು ಕೇಳುತ್ತಿದೆ
ಹೆದರಿ ಮೆಲ್ಲಗೆ-
“ಪ್ರತಿ ದೋಣಿಗೂ ಒಂದು ತೀರ ಇರೋದಾದರೆ
ನನಗೂ ಇದೆಯಾ?”
ಒಂದು ಮುಗ್ಧ ಮಗು
ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ!
ಮಂಡಿ, ಬಾಜಾರುಗಳಿಂದ ಹಾದು
ಕೆಂಪು ಗಲ್ಲಿಯಿಂದ ಸಾಗುತ್ತಿದೆ ಒಂದು ಕಾಗದದ ದೋಣಿ
ಮಳೆಯ ಅನಾಥ ನೀರಿನ ಮೇಲೆ ಕೂತು
ಶಹರದ ಅಲೆಮಾರಿ ಬೀದಿಗಳನ್ನು ಕೇಳುತ್ತಿದೆ
ಹೆದರಿ ಮೆಲ್ಲಗೆ-
“ಪ್ರತಿ ದೋಣಿಗೂ ಒಂದು ತೀರ ಇರೋದಾದರೆ
ನನಗೂ ಇದೆಯಾ?”
ಒಂದು ಮುಗ್ಧ ಮಗು
ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ!
ಮೂಲ-ಗುಲ್ಜಾರ್
ಅನುವಾದ-ವಿದ್ಯಾ
anuvAdagalu tumba channagive vidya ji. beautifully done.
ಹೆಸರಿನಿಂದಷ್ಟೇ
ಬದುಕ ಬೇಕಾಗುತ್ತದೆ..
ಸಂಬಂಧಗಳು
ಬರೀ ಸಂಬಂಧಗಳಷ್ಟೆ.
ಅಕ್ಷರಶಃ ಸತ್ಯ.
ಒಂದು ಮುಗ್ಧ ಮಗು
ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ! Beautiful
ಮಳೆಯ ಅನಾಥ ನೀರಿನ ಮೇಲೆ ಕೂತು
ಶಹರದ ಅಲೆಮಾರಿ ಬೀದಿಗಳನ್ನು ಕೇಳುತ್ತಿದೆ
ಹೆದರಿ ಮೆಲ್ಲಗೆ-
“ಪ್ರತಿ ದೋಣಿಗೂ ಒಂದು ತೀರ ಇರೋದಾದರೆ
ನನಗೂ ಇದೆಯಾ?”
ಒಂದು ಮುಗ್ಧ ಮಗು
ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ!..ultimate…
ಚೆನ್ನಾಗಿದೆ.