ವಿದ್ಯಾ ಅನುವಾದಿಸಿದ ಗುಲ್ಜಾರ್ ಕವಿತೆಗಳು

ವಿದ್ಯಾ

1

ಸಂಬಂಧಗಳು ಬರೀ ಸಂಬಂಧಗಳಷ್ಟೇ
ಕೆಲವು ಒಂದು ಕ್ಷಣದ್ದು
ಕೆಲವು ಎರಡು ಕ್ಷಣಗಳದ್ದು..
 
ಕೆಲವು ಗರಿಗಳಿಗಿಂತ ಹಗುರ
ವರ್ಷಗಳಡಿಯಲ್ಲಿ ನಡೆಯುತ್ತ
ಭಾರವಾಗಿ-ತೂಕದ್ದಾಗಿಬಿಡುತ್ತವೆ
 
ಭಾರೀ ತೂಕದ ಮಂಜುಗಡ್ಡೆಗಳಂಥವು
ಹಗುರವಾಗಿಬಿಡುತ್ತವೆ
ವರ್ಷಗಳು ಕಳೆದಂತೆ
 
ಹೆಸರಿರುವ ಸಂಬಂಧಗಳು
ಹೆಸರಿಗಷ್ಟೇ ಇರುವ ಸಂಬಂಧಗಳು
ಸತ್ತ ಮೇಲೂ ಹೆಸರಿನ ಮೇಲೆ
ಬದುಕುಳಿವ ಸಂಬಂಧಗಳು..ಹೀಗೆ..
 
ಹೆಸರಿನಿಂದಷ್ಟೇ ಬದುಕಬೇಕಾಗುತ್ತದೆ..
ಸಂಬಂಧಗಳು ಬರೀ ಸಂಬಂಧಗಳಷ್ಟೆ..
ಮೂಲ-ಗುಲ್ಜಾರ್ 2
ಚೌಕದಿಂದ ಹೊರಟು,
ಮಂಡಿ, ಬಾಜಾರುಗಳಿಂದ ಹಾದು
ಕೆಂಪು ಗಲ್ಲಿಯಿಂದ ಸಾಗುತ್ತಿದೆ ಒಂದು ಕಾಗದದ ದೋಣಿ
 
ಮಳೆಯ ಅನಾಥ ನೀರಿನ ಮೇಲೆ ಕೂತು
ಶಹರದ ಅಲೆಮಾರಿ ಬೀದಿಗಳನ್ನು ಕೇಳುತ್ತಿದೆ
ಹೆದರಿ ಮೆಲ್ಲಗೆ-
“ಪ್ರತಿ ದೋಣಿಗೂ ಒಂದು ತೀರ ಇರೋದಾದರೆ
ನನಗೂ ಇದೆಯಾ?”
 
ಒಂದು ಮುಗ್ಧ ಮಗು
ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ!
ಮೂಲ-ಗುಲ್ಜಾರ್
ಅನುವಾದ-ವಿದ್ಯಾ

‍ಲೇಖಕರು G

May 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    anuvAdagalu tumba channagive vidya ji. beautifully done.

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಹೆಸರಿನಿಂದಷ್ಟೇ
    ಬದುಕ ಬೇಕಾಗುತ್ತದೆ..
    ಸಂಬಂಧಗಳು
    ಬರೀ ಸಂಬಂಧಗಳಷ್ಟೆ.
    ಅಕ್ಷರಶಃ ಸತ್ಯ.

    ಪ್ರತಿಕ್ರಿಯೆ
  3. vidyashankar

    ಒಂದು ಮುಗ್ಧ ಮಗು
    ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
    ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ! Beautiful

    ಪ್ರತಿಕ್ರಿಯೆ
  4. Ravivarma

    ಮಳೆಯ ಅನಾಥ ನೀರಿನ ಮೇಲೆ ಕೂತು
    ಶಹರದ ಅಲೆಮಾರಿ ಬೀದಿಗಳನ್ನು ಕೇಳುತ್ತಿದೆ
    ಹೆದರಿ ಮೆಲ್ಲಗೆ-
    “ಪ್ರತಿ ದೋಣಿಗೂ ಒಂದು ತೀರ ಇರೋದಾದರೆ
    ನನಗೂ ಇದೆಯಾ?”
    ಒಂದು ಮುಗ್ಧ ಮಗು
    ಕ್ಷುಲ್ಲಕವಾದದ್ದಕ್ಕೆ ಮಹತ್ವ ಕೊಟ್ಟು
    ರದ್ದಿ ಕಾಗದದ ಮೇಲೆ ಎಷ್ಟು ಅನ್ಯಾಯ ಮಾಡಿಬಿಟ್ಟಿದೆ!..ultimate…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: