ವಸುಂಧರಾ ಕದಲೂರು ಹೊಸ ಕವಿತೆ – ಕಾಣೆಯಾಗಿದ್ದಾರೆ!

ವಸುಂಧರಾ ಕದಲೂರು

….. ಹಾಗೆಂದು
ಸಮಾಧಾನ ಪಡಬೇಕು
ಈಗ

ಇದ್ದೂ ಇಲ್ಲದ ಹಾಗೆ ಇರಲು
ಬಯಸುವವರು ಕಾಣೆ
ಆಗಬಹುದು ಕಣ್ಣೆದುರಿಂದ
ಯಾವಾಗಲಾದರು..

ಕಣ್ಮರೆಯಾಗುವವರು
ನಮ್ಮ ಮನದ ಯವನಿಕೆಯಲಿ
ಸೊಗಸು ಚಿತ್ರವಾಗಿ, ಕನಸುಗಳಲಿ ಕನವರಿಕೆಯಾಗಿರುತಾರೆ..

ಹಾಗೆ.. ಚಿತ್ತ ಭಿತ್ತಿಯಲಿ ಮನೆ ಮಾಡಿ
ನೆಲೆಯಾದವರು ದಿಢೀರ್
ಮರೆಯಾಗಿ ಕಣ್ಣ ಹನಿಯಾಗಿ
ಉಳಿದು ಕಾಣೆಯಾಗುತ್ತಾರೆ..

ರೆಪ್ಪೆ ಬಡಿದು ಜಾರಿಸಿ ಬಿಡುವ
ಅವಕಾಶವಿದ್ದರೂ ಒಲವ
ಹುಚ್ಚು ದಿಗ್ಬಂಧನ ನಮ್ಮ ರೆಪ್ಪೆ
ಬಡಿಸದು…

ಆದರೂ ಹೀಗೆಲ್ಲಾ ಕಾಯುವಿಕೆಯ
ನೋವ ನುಂಗಿ ನರಳುವ,
ವ್ಯರ್ಥ ನಿರೀಕ್ಷೆಯಲೇ ಕಾಲ
ನೂಕುವ ಮಹಾ ಸಂಕಟವನೇ
ಉಣ್ಣುವ ಬದಲು,

ಅವರು ಕಾಣೆಯಾಗಿದ್ದಾರೆ!
ಎಂದು ಸಮಾಧಾನ ಪಡುವುದು
ನೂರು ಪಾಲು ಉತ್ತಮ..

‍ಲೇಖಕರು Admin

July 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: