ಕರ್ನಾಟಕ ಲೇಖಕಿಯರ ಸಂಘ ತನ್ನ ‘ಸಾಹಿತ್ಯ ಸಂಚಲನ’ ಕಾರ್ಯಕ್ರಮದ ಅಂಗವಾಗಿ ‘ಎಕ್ಕುಂಡಿ ಎಂಬ ತೆರೆದ ಬಾಗಿಲು’ ಉಪನ್ಯಾಸವನ್ನು ಹಮ್ಮಿಕೊಂಡಿತ್ತು
ಬಿ ಎಂ ಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಜಿ ಎನ್ ಮೋಹನ್ ಅವರು ಸು ರಂ ಎಕ್ಕುಂಡಿಯು ಅವರ ಬದುಕು ಹಾಗೂ ಕಾವ್ಯದ ಕುರಿತು ಮಾತನಾಡಿದರು.
ಎಕ್ಕುಂಡಿಯವರ ಕುಟುಂಬವರ್ಗ ಪ್ರೀತಿಯಿಂದ ಈ ಸಮಾರಂಭದಲ್ಲಿ ಭಾಗವಹಿಸಿತ್ತು
ಎಕ್ಕುಂಡಿಯವರ ಮಕ್ಕಳಾದ ಭಾರತಿ ಹಾಗೂ ರಂಗನಾಥ ಎಕ್ಕುಂಡಿ ಅವರು ತಮ್ಮ ತಂದೆಯ ಬದುಕಿನ ಪ್ರೀತಿಯ ಬಗ್ಗೆ ಮಾತನಾಡಿದರು.
ಖ್ಯಾತ ಛಾಯಾಗ್ರಾಹಕರಾದ ಎ ಎನ್ ಮುಕುಂದ್ ಅವರು ಎಕ್ಕುಂಡಿಯವರನ್ನು ಕ್ಲಿಕ್ಕಿಸಿದ ಅನುಭವ ಮುಂದಿಟ್ಟರು.
ಬಿ ಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಆರ್ ಲಕ್ಷ್ಮೀನಾರಾಯಣ ಅವರು ಎಕ್ಕುಂಡಿಯವರ ಕವಿತೆಯ ಒಳಗಿನ ಕಥನ ರೀತಿಯ ಪರಿಯನ್ನು ಬಿಡಿಸಿಟ್ಟರು.
ಸಂಘದ ಅಧ್ಯಕ್ಷರಾ ವನಮಾಲಾ ಸಂಪನ್ನಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಲೇಖಕಿಯರ ಸಂಘ ಸಾಹಿತ್ಯ ಸಂಚಲನದ ಮೂಲಕ ನಡೆಸುತ್ತಿರುವ ಸಂಚಲನವನ್ನು ವಿವರಿಸಿದರು.
ಹರ್ಷಿತಾ ಪಾಟೀಲ್, ಶ್ರುತಿ ಮೋಪಗಾರ್ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕಂಡಂತೆ ಕಾರ್ಯಕ್ರಮ ಹೀಗಿತ್ತು-
New look of avadhi is fentastic