ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಹರಿ ಹರಿದೈತಿ ಚುನಾವಣಿ ಕಡೆಗೆ

ಚುನಾವಣೆಗಳ ಹೊಸ್ತಿಲಲ್ಲಿ ಹನಿಗವನಗಳ ಪ್ರಣಾಳಿಕೆ

ಪರೇಶ ಸರಾಫ

ಜಾರಿ

ಚುನಾವಣೆ ಹತ್ತಿರ ಬಂತು
ಈಗಾಗಲೇ
ನೀತಿ ಸಂಹಿತೆ ಜಾರಿ;
ಮತದಾರರೇ
ಎಚ್ಚರಿಕೆ, ಬೀಳದಿರಿ ಜಾರಿ!

ಗಗನಕ್ಕೇರಿದ ಬಿಲ್ಲು

ಆಕೆಯೆಂದಳು-
“ಗೆಳೆಯ ಆಕಾಶ ನೋಡು-
ಮೂಡಿದೆ ಕಾಮನ ಬಿಲ್ಲು”;
ನಾ ನೋಡಿದರೆ ಕಂಡಿದ್ದು-
ಪೆಟ್ರೋಲ್, ಗ್ಯಾಸ್,
ಕರೆಂಟ್ ಬಿಲ್ಲು!
 
ಪ್ರಣಾಳಿಕೆ
ಅವರದ್ದು
ಅತ್ಯುತ್ತಮ

ಚುನಾವಣಾ ಪ್ರಣಾಳಿಕೆ;

ಆರಿಸಿ ಬಂದ ಮೇಲೆ
ಮುಕ್ಕಿ ತಿಂದರು,
ಪ್ರಜೆಗಳಿಗೆ ಮಿಕ್ಕಿದ್ದು
ಬರೀ ಪಳೆಯುಳಿಕೆ!

ಹಕ್ಕು

ಸರ್ಕಾರ ಹೇಳುತ್ತಿದೆ-
“ದೇಶ ನಿರ್ಮಾಣದಿ
ನಿಮಗೆ ಹಕ್ಕಿದೆ”;
ಎಲ್ಲಾ ಅವರು ತಿಂದಾಯ್ತು
ಇನ್ನೇನು ಮಿಕ್ಕಿದೆ?!

ರಾಜ(ಡಿ)ಕೀಯ
ಕೆಲವರದು
ಜಾತಿ ರಾಜಕೀಯ,
ಕೆಲವರದು
ಕುಟುಂಬ ರಾಜಕೀಯ;
ಒಟ್ಟಿನಲ್ಲಿ
ಪ್ರಜೆಗಳ ಹಣ ಮಾಯ!
 
ತೆರಿಗೆ ಎಲ್ಲಿಗೆ?
ನಾವು ಕೊಡುವ
ತೆರಿಗೆಯಿಂದ
ತುಂಬಿದ್ದು
ಭ್ರಷ್ಟ ಮಂತ್ರಿಗಳ
ಮನೆಯ ಚೆರಿಗೆ!
 
ಮಠ ರಾಜಕೀಯ
ಮಠಗಳಿಗೆ
ಕೋಟಿ;
ಜನ ಸಾಮಾನ್ಯರಿಗೆ
ಚಾಟಿ!
 
ತೋರಿಕೆಯ ಯೋಜನೆ
ಚುನಾವಣೆ ಸಮಯ
ಹತ್ತಿರ ಬರುತ್ತಿದ್ದಂತೆ
ಹಲವಾರು ಯೋಜನೆಗಳ
ಜಾರಿ;
ಗೆದ್ದು ಬಂದ ಮೇಲೆ
ಹೇಳುವರು-
“ನೀವ್ಯಾರೋ ಗೊತ್ತಿಲ್ಲ
sorry”
 
 

‍ಲೇಖಕರು avadhi

29 March, 2013

4 Comments

  1. pravara

    ಹನಿಗಳ ಚಾಟಿ… ಒಂದಕ್ಕಿಂದ ಒಂದು ಏಟು ಜೋರಾಗಿದೆ…

  2. ಮಂಜಿನ ಹನಿ

    ಚಂದದ ಹನಿಗಳು. ಕವಿಮನದ ಭಾವಗಳಲ್ಲಿ ಸಾಮಾಜಿಕ ತುಡಿತ ಇರುವುದು ಅರ್ಥವಾಗುತ್ತದೆ.
    – ಪ್ರಸಾದ್.ಡಿ.ವಿ.

  3. Sharada.m

    ಹನಿಗಳ ಚಾಟಿ… ಒಂದಕ್ಕಿಂದ ಒಂದು ಏಟು ಜೋರಾಗಿದೆ…
    ಚಂದದ ಹನಿಗಳು

  4. samyuktha

    punch paresh! 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading