ಶಾಂತಿ ಅಪ್ಪಣ್ಣ
ನಾವು ……
ರಾತ್ರಿಗಳ ಮಾರಿಕೊಂಡು
ಕನಸುಗಳ ಕೊಳ್ಳುವವರು ..
ಹಗಲ ಬೆಳಕಿಗೆ ಕಣ್ಮುಚ್ಚಿಕೊಂಡು
ಕತ್ತಲಲಿ ಬೆತ್ತಲಾಗುವವರು
ನಾವು …
ಬೀದಿ ದೀಪದ ನೆರಳಿಗೆ
ಬಣ್ಣ ತುಂಬುವವರು ..
ಬೆವರು ನೆತ್ತರು ಬಸಿದು
ಬೆವರ ಈಂಟುವವರು

ನಾವು …
ಹಿಮಗಲ್ಲಿನೆದೆಯವರು
ಯಾರದೋ ದಾಹಕ್ಕೆ ನೀರಾಗುವರು ..
ಕಿಬ್ಬೊಟ್ಟೆಯಾಳದಲಿ
ಆತ್ಮವನು ಹೂತವರು
ನಾವು..
ಬೇಗುದಿಯ ಬೆಂಕಿಯಲಿ
ಬೂದಿಯಾಗದೆ ಉಳಿದವರು
ಒಡಲ ದಳ್ಳುರಿಯಲಿ
ಅವಮಾನಗಳ ಸುಡುವವರು ..
ನಾವು ..
ಛಂದ ಬಂಧಗಳ ಗುಂಗು ಮರೆತು
ಅಭಂಗವಾದವರು …
ಮಾನ ಪ್ರಾಣದ ಹಂಗು ತೊರೆದು
ನಿರ್ವಾಣವಾದವರು .






Shanti avare tumba chennagide
nice very nice..shanti avare..!!!
Simple yet very nice, as always, Shanthi.