ಶಿವು ಮೊರಿಗೇರಿ
ಸಾಹಿತ್ಯಕ್ಕೆ ಶೃತಿ, ರಾಗ,ತಾಳ ಮೇಳಗಳ ಸಂಗೀತ ಸೇರಿತೆಂದರೆ ಅನುಮಾನವೇ ಬೇಡ ಅಲ್ಲಿ ತಲೆಬಾಗದವರೇ ಇಲ್ಲ. ಇಂಥಹ ಒಂದು ಪ್ರಯೋಗ ಸಮ್ಮೇಳನದ ಮೊದಲ ದಿನದ ಕಾವ್ಯ-ಗಾಯನ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಡಾ.ಕೆ.ಪಿ ಬಾಲಸುಬ್ರಹ್ಮಣ್ಯ ಕಾರ್ಯಕ್ರಮದ ಆಶಯನುಡಿಯನ್ನು ಹೇಳುತ್ತಿರುವಾಗ ಕೊಂಚ ವಿದ್ಯುತ್ ಅವಘಡದ ಗೊಂದಲ ಮುಗಿದ ತಕ್ಷಣ ವೇದಿಕೆಯಲ್ಲಿದ್ದ ಒಬ್ಬೊಬ್ಬ ಕವಿ/ಕವಯಿತ್ರಿಯರ ಒಂದೊಂದೇ ಕವಿತೆಗಳು ನರಸಿಂಹ ನಾಯಕ್, ವೈ.ಕೆ. ಮುದ್ದುಕೃಷ್ಣ, ಶ್ರೀನಿವಾಸ ಉಡುಪ, ಶ್ರೀಮತಿ ಎಸ್.ಸುನಿತ, ಶ್ರೀಮತಿ ಸೀಮಾ ರಾಯ್ಕರ್ ರ ಕಂಠಗಳಲ್ಲಿ ರಾಗಪಡೆದವೋ ಸೇರಿದ್ದ ಸಭಿಕರೆಲ್ಲ ತಲೆದೂಗಿದರು.
ಎಂ.ಎನ್.ವ್ಯಾಸರಾವ್ ರ ‘ಹಾಡಿಲ್ಲದ ನಾಡಲ್ಲಿ ಹಾಡಾಗುವ ನಾವು’, ಲಕ್ಷಿಪತಿ ಕೋಲಾರರ ‘ನವಿಲುಮರಿ ಕಿನ್ನರಿ’, ಡಾ.ಕಾ.ವೆಂ.ಶ್ರೀನಿವಾಸಮೂರ್ತಿರ, ಹರಿದಿದೆ ನೋಡಿ ಕನ್ನಡ ರಥವು’, ವಿ.ಸಿ. ಐರಸಂಗರ ‘ಸೊಗದ ಸೃಷ್ಠಿ’, ರಂಜನಿ ಪ್ರಭುರ ‘ಒಂದೇ ಒಂದು ಘಳಿಗೆಯಲ್ಲಿ’, ಬಿ. ಷಂಶುದ್ದೀನ್ ರ ‘ಬೇರಬ್ಬು’, ಡಾ.ವಿನಯಾ ಒಕ್ಕುಂದರ ‘ಹೊಸ ನದಿಯ ಹುಡುಕಿ’, ಡಾ.ಧರಣಿ ದೇವಿ ಮಾಲಗತ್ತಿಯವರ ‘ದೀಪದ ಮಲ್ಲಿ’, ಕವಿತಾಕೃಷ್ಣರ ತೇರನೇರು ಬಾ ತಾಯಿ’, ವಿಜಯ ಸಬರದರ ‘ಮನದೊಡೆಯನ ಹಾಡು’ ಕವಿತೆಗಳು ವೇದಿಕೆಯಲ್ಲಿ ಗಾಯನಗಳಾಗಿ ಕಾರ್ಯಕ್ರಮ ಮುಗಿಯುವವರೆಗೂ ಪ್ರೇಕ್ಷಕರ ಗಾರುಡಿಗರಂತಿದ್ದದ್ದು ಸುಳ್ಳಲ್ಲ.

ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :


0 Comments