ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಮೇಶ್ ಅರವಿಂದ್ ಹೇಳಿದ ಗೋಡೆಯ ಕಥೆ..

ಸಂಧ್ಯಾರಾಣಿ 

ಧಾರವಾಡ ಸಾಹಿತ್ಯ ಸಂಭ್ರಮದ ಕಡೆಯ ದಿನದ ಸಂವಾದದಲ್ಲಿ ರಮೇಶ್ ಅರವಿಂದ್ ಒಂದು ಕಥೆ ಹೇಳಿದರು.

ಒಂದರ ಪಕ್ಕ ಒಂದರಂತೆ ಎರಡು ಹಳ್ಳಿಗಳು. ಒಂದು ಹಳ್ಳಿಯ ಹೆಸರು ಕಕಕಿ, ಇನ್ನೊಂದು ಹಳ್ಳಿಯ ಹೆಸರು ಕಿಕಕಿ.

ಎರಡು ಹಳ್ಳಿಗಳ ನಡುವೆ ದೊಡ್ಡ ಗೋಡೆ. ಈ ಹಳ್ಳಿಯವರಿಗೂ ಆ ಹಳ್ಳಿಯವರಿಗೂ ಬದ್ಧ ದ್ವೇಷ. ಏನು ಕಾರಣ ಎಂದು ಯಾರಿಗೂ ಗೊತ್ತಿಲ್ಲ.

ಈ ಹಳ್ಳಿಯವರು ಮಕ್ಕಳಿಗೆ ಆ ಹಳ್ಳಿ ಜನ ಸರಿ‌ ಇಲ್ಲ. ಪ್ರತಿ ದಿನ ಬೆಳಗ್ಗೆ ಎದ್ದು ವಿಷ ಕುಡಿಯುತ್ತಾರೆ, ಅವರ ಊರಿಗೆ ಹೆಜ್ಜೆ ಇಡಬೇಡಿ ಎಂದು ಹೇಳುತ್ತಿದ್ದರು. ಆ ಊರಿನ ಜನ ಮಕ್ಕಳಿಗೆ ಪಕ್ಕದ ಊರಿಗೆ ಹೋಗಬೇಡಿ, ಆ ಊರಿನ ಜನ ದಿನಾ ಎದ್ದು ರಕ್ತ ಕುಡೀತಾರೆ ಎಂದು ಹೇಳುತ್ತಿದ್ದರು.

ಒಂದು ದಿನ ಈ ಊರಿನ ಮಕ್ಕಳು ಚೆಂಡಾಟ ಆಡುತ್ತಿದ್ದಾಗ ಚೆಂಡು ಗೋಡೆ ದಾಟಿ ಆ ಕಡೆ ಹೋಗಿಬಿಡುತ್ತದೆ. ಮಕ್ಕಳಿಗೆ ಗಾಬರಿ. ಏನಾಗುತ್ತದೋ ಎಂದು ಕಾಯುತ್ತಿದ್ದಾಗ ಆ ಕಡೆಯಿಂದ ಕಿಲಕಿಲ ನಗುವಿನ ಸದ್ದು ಕೇಳಿಸುತ್ತದೆ‌. ಮಕ್ಕಳಿಗೆ ಅಚ್ಚರಿ.

ಮರು ನಿಮಿಷದಲ್ಲಿ ಆ ಕಡೆಯಿಂದ ಚೆಂಡು ಈ ಕಡೆಗೆ ಚಿಮ್ಮುತ್ತದೆ. ಮತ್ತೆ ಮಕ್ಕಳು ಚೆಂಡೆಸೆಯುತ್ತಾರೆ, ಮತ್ತೆ ಚೆಂಡು ಬರುತ್ತದೆ. ಅರೆ ಆ ಕಡೆ ಸಹ ಮಕ್ಕಳೇ ಇದ್ದಾರೆ ಎನ್ನುವುದು ಅರಿವಾಗುತ್ತದೆ. ಚೆಂಡಾಟ ಮುಂದುವರೆಯುತ್ತದೆ.

ಗೋಡೆಗಳಿಂದ ಲಾಭ ಆಗುವುದು ಗೋಡೆ ಕಟ್ಟುವವನಿಗೆ ಮಾತ್ರ. ಗೋಡೆಯ ಎರಡೂ ಬದಿಯಲ್ಲೂ ಮನುಷ್ಯರೇ ಇರುತ್ತಾರೆ, ಮಕ್ಕಳೇ ಇರುತ್ತಾರೆ.

ಇನ್ನು ಹೇಳಲೇನು ಹೆಚ್ಚಿಗೆ?

‍ಲೇಖಕರು admin

23 January, 2017

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading