ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಉಪಾಸನಾ ಟ್ರಸ್ಟ್, ಬಹುರೂಪಿ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆಗಳು ಜಂಟಿಯಾಗಿ ‘ರಂಜನಿ ಪ್ರಭು-60’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ರಂಜನಿ ಪ್ರಭು ಅವರ ‘ವೈಶಾಖದ ಹನಿಗಳು’ ಕೃತಿ ಹಾಗೂ ಬಣ್ಣದೋಕುಳಿ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕವಯತ್ರಿ ಎಂ ಆರ್ ಕಮಲ, ಎಚ್ ಆರ್ ಲೀಲಾವತಿ, ಖ್ಯಾತ ಕವಿ ಬಿ ಆರ್ ಲಕ್ಷ್ಮಣ ರಾವ್, ಶ್ರೀನಿವಾಸ ಪ್ರಭು, ಸಂಗೀತ ನಿರ್ದೇಶಕ ಉಪಾಸನಾ ಮೋಹನ್, ಬಹುರೂಪಿಯ ಜಿ ಎನ್ ಮೋಹನ್, ಹಿರಿಯ ರಂಗಕರ್ಮಿಗಳಾದ ಡಾ ಬಿ ವಿ ರಾಜಾರಾಂ, ಉಪಸ್ಥಿತರಿದ್ದರು.
0 ಪ್ರತಿಕ್ರಿಯೆಗಳು