ಹಗಲುಗಳ್ಳರ ಹಾಸಿಗೆಯಲಿ..

ಹಸಿರೆಲೆಯ ಮೇಲಿನ ಹನಿಯೊಂದು ದನಿಗೂಡಿಸುತಿದೆ
ಹನಿಗೂಡಲಿ ಹಳ್ಳವಾಗಲಿ ಹರಿದು ಹೋಗಲಿ ಕೊಳೆಯಲ್ಲ
ಬಿದ್ದ ನೆಲವು ಸದ್ದುಮಾಡಲಿ ಕೈ ಹಿಡಿದು ನಿಲ್ಲಿಸಲಿ
ಹದವಾದೆದೆಯಲಿ ಹಸಿರು ಪೈರನ್ನ..
ಎತ್ತಲಿಂದೆದ್ದು ಬಂದರೇನು ಬಿರುಗಾಳಿ
ಕತ್ತಲೇನೂ ಆಗಿಲ್ಲ ಬಿತ್ತಿ ನಡೆ ನೀ ಮುಂದೆ
ಯಾವ ಹುತ್ತದ ಹಾವು ಯಾರಿಗೇನಾದರೂ ಹೇಳಲಿ
ದಾರಿಗಡ್ಡ ನಿಂತವರ ಬೇರು ಕಿತ್ತೆಸೆದುಬಿಡು
ಹರಿವ ನದಿಯೊಳು ಮುಳುಮುಳುಗೆದ್ದೇಳು
ಘಳಿಗೆಯೊಂದು ಕಾದಿರುವದು
ಬಳಿಗೆಬಂದ ಭೂತವೂ ಹೂತುಹೋಗುವದು ಬೆಳೇಯಲೇನೂ ಭಯವಿಲ್ಲ
ಭುವಿಯೇನು ಬಗವಂತನ ಬಿಕ್ಷಾ ಪಾತ್ರೆಯಲ್ಲ..
ಅದು ಬಡವನ ಬದುಕಿಗೆ ರಕ್ಷಾ ಪಾತ್ರೆ..
ಎಲ್ಲೆಂದರಲ್ಲಿ ಹರಿದು ಹೋಗಿಹಳು ಹಗಲುಗಳ್ಳರ ಹಾಸಿಗೆಯಲಿ
ಹೊರಳಾಡಿ, ನರಳಾಡಿ, ಹಸಿರೆಲ್ಲ ಬರಿ ಕೆಸರಾಗಿಹೋಗಿದೆ
ಹೆಸರಿಗೆ ಮಾತ್ರ ನಿಸರ್ಗದೇವತೆ ನಿಂತಿಹಳು ನಿಮ್ಮೆದುರು
ಸೃಷ್ಠಿಯಲಿ ಸೃಷ್ಟಿಯಾದ ದೃಷ್ಟಿಗೊಂಬೆಯಾಗಿ..
ಹಸಿರೆಲೆಯ ಮೇಲಿನ ಹನಿ ನೀನಾಗು ಜನಧನಿ..!!






ಎಲ್ಲೆಂದರಲ್ಲಿ ಹರಿದು ಹೋಗಿಹಳು ಹಗಲುಗಳ್ಳರ ಹಾಸಿಗೆಯಲಿ
ಹೊರಳಾಡಿ, ನರಳಾಡಿ, ಹಸಿರೆಲ್ಲ ಬರಿ ಕೆಸರಾಗಿಹೋಗಿದೆ
ಕವಿತೆಯ ಸಾಲುಗಳು ಚೆನ್ನಾಗಿವೆ…
ಧನ್ಯವಾದಗಳು ಪ್ರಕಾಶ.ಬಿ.ಜಾಲಹಳ್ಳಿ ಸರ್.
ತುಂಬ ಸುಂದರ ಕವಿತೆ…
ಪದ್ಯ ಬಾಳ ಚೊಲೊ ಐತ್ರಿ..
ಧನ್ಯವಾದಗಳು ಡಾ.ಸರ್ ಮತ್ತು ಹೊಸಮನಿ ಸರ್… ನಿಮ್ಮ ಪ್ರೋತ್ಸಾಹದ ಜೊತೆಗೆ ಸಲಹೆಗಳಿಗೂ ಸ್ವಾಗತ ಸರ್
Nice lines Suresh sir