ಕಟಕಟೆಯಲ್ಲಿ ನಿಂತು ಉತ್ತರಿಸುವುದು ಬಲು ಕಷ್ಟ

ಟಿ ಎಸ್ ಗೊರವರ
1
ಒಮ್ಮೊಮ್ಮೆ ಚಾಳೀಸು ಕೂಡ ಮಬ್ಬು ಕವಿಯುವದು
ಹಸಿರು ಮರ ಒಣಗಿದಂತೆ, ಒಣಗಿದ ಮರ ಹಸಿರಾಗಿ ತೋರುವುದು ;
ಯಾರಿಗೂ ಜಾಗ ಕೊಡಬೇಡ ಎದೆಯೊಳಗೆ
ಜೊತೆಗೆ ತುತ್ತು ತಿಂದವರು ಜೊತೆಗಿಲ್ಲ

ಇಲ್ಲಿ ಅಚಾನಕ್ಕಾಗಿ ಒಂದೇ ಬಣ್ಣ ಬೆರಯಬಾರದು
ಆ ಬಣ್ಣ ಈ ಬಣ್ಣವೆಂದು ಹೆಸರಿಟ್ಟವರೇ ಇಲ್ಲಿ ತೀರ್ಪುಗಾರರು
ಕಟಕಟೆಯಲ್ಲಿ ನಿಂತು ಉತ್ತರಿಸುವುದು ಬಲು ಕಷ್ಟ

ಅವನ ರೆಪ್ಪೆಯಲ್ಲಿ ಕಣ್ಣ ಹನಿ ತೂಗುತ್ತಿದ್ದರೆ ಒರೆಸಬಾರದು
ಜಗತ್ತು ಕುಹಕವಾಡದೆ ಸುಮ್ಮನಿರಲಾರದು
ಮರುಕ ಉಮ್ಮಳಿಸಿ ಬಂದರೂ ಮರುಗಲೇಬಾರದು
ಲೋಕದ ತುಟಿಯಲಿ ಅಂಟಿಕೊಂಡಿದೆ ವ್ಯಂಗ್ಯ

ಅನುದಿನವೂ ಒಡನಾಡುವ ಕೈಗಳು
ಒಂದರ ಮೇಲೊಂದು ಸುಖಾ ಸುಮ್ಮನೆ ಕೇಸು ಹಾಕಿವೆ ;
ಕಡ ತಂದ ವಿಚಾರಗಳು ಕಸಿಗೊಂಡಿವೆ
ಒಂದರ ಪ್ರೀತಿ ಮತ್ತೊಂದರ ಅರಿವಿಗೆ ಬರುವುದೇ ಇಲ್ಲ ಇಲ್ಲಿ

ಅಲ್ಲಿ ಇಲ್ಲಿ ಹರಡಿದೆ ಜಾತಿ
ಕೂಡಿ ನಡೆಯಬಹುದು ಬೆಕ್ಕು, ನಾಯಿ
ಮನುಷ್ಯ ಮನುಷ್ಯರು ಕೂಡಿ ನಡೆಯಬಾರದು ಇಲ್ಲಿ





ಒಂದರ ಪ್ರೀತಿ ಮತ್ತೊಂದರ ಅರಿವಿಗೆ ಬರುವುದೇ ಇಲ್ಲ ಇಲ್ಲಿ
ಮನುಷ್ಯ ಮನುಷ್ಯ ಕೂಡಿ ನಡೆಯಬಾರದಿಲ್ಲಿ.. ನಿಜ
ಚೆನ್ನಾಗಿದೆ
ಎದೆಯೊಳಗೆ ಯಾರಿಗೂ ಜಾಗ ಕೊಡದೇ ಇರುವುದಾದರೆ ಬದುಕೇಕೆ ಮತ್ತೆ ??/
channaagide
Khushiyaytu. . . .
ಚೆನ್ನಾಗಿದೆ ಕವಿತೆ.