ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೆ?

ರಾಘವೇಂದ್ರ ಜೋಶಿ

ಆ ದಿನಗಳು

ಅಮ್ಮನ ಮಡಿಲು

ಪಪ್ಪನ ಭುಜ

ಎಲ್ಲ ನೆನಪಾಗುತಿದೆ..

ಅದೆಷ್ಟೋ ಚಂಚಲ

ಕ್ಷಣಗಳು ಅಲ್ಲೇ ಉಳಿದುಬಿಟ್ಟವಲ್ಲ

ಅಳುತ್ತ ಅಳುತ್ತ

ಅದು ಹೇಗೋ ಮಲಗಿಬಿಡುತ್ತಿದ್ದೆವು

ಏನೇನೋ ಕನವರಿಸುತ್ತ

ಅದೆಲ್ಲೋ ಕಳೆದುಹೋಗುತ್ತಿದ್ದೆವು

ತುಸುಹೊತ್ತಿಗೆಲ್ಲ

ಅಮ್ಮನ ಕ್ಷೀಣ ಕೂಗು

ಜೊತೆಗೊಂದು ಕೈತುತ್ತು;

ಮೊಸರು ಅವಲಕ್ಕಿ

ಸಂಜೆ ಪಪ್ಪನ

ಬರುವಿಕೆಗಾಗಿ

ಕಾಯುತ್ತಿದ್ದ ಕ್ಷಣ,

ಇವತ್ತೂ ನಂದೇ

ಹಠ ಗೆದ್ದಿತು

ಅಂತನಿಸುವ ಸಂಭ್ರಮಿಸುವ ಕ್ಷಣ

ಬಾಲ್ಯದ ದಿನಗಳೇ ಹಾಗೆ

ಎಲ್ಲಿ ಹೋದಿರಿ ನೀವೆಲ್ಲ

ಇವತ್ತು

ಇದ್ದ ಹಠವೆಲ್ಲ ನಮ್ಮದಾಗಿದೆ

ಬಿದ್ದ ಕನಸೆಲ್ಲ ನಮ್ಮದಾಗುತ್ತಿದೆ

ನಿಜವಾಗಿಯೂ

ಬೇಕಾಗಿರುವದೇನು ಅಂತ

ಯಾರಿಗೆ ಹೇಳುವದು

ಕನಸುಗಳ ಬೆನ್ನತ್ತಿ

ತುಂಬ ದೂರ ಬಂದಾಗಿದೆ;

ಕಳೆದು ಹೋದಂತಾಗಿದೆ

ಛೇ,ಯಾಕೆ ಬೆಳೆದು

ದೊಡ್ಡವರಾಗ್ತಿವೋ..

ಯಾಕೆ..??

‍ಲೇಖಕರು avadhi

24 April, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. ganesh

    fine

  2. Mallikarjuna Barker

    Nice yar, Almost for many persons, feels the same thing,
    KEEP WRITING.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading