ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಮುನಾ ಗಾಂವ್ಕರ್ ಹೊಸ ಕವಿತೆ- ಇಷ್ಟು ಸಾಕು ಉಸಿರು ಆರದಿರಲು!

ಯಮುನಾ ಗಾಂವ್ಕರ್

ಬದುಕು ಹೇಳಿದ ಚಿತ್ರಗಳ ಬಿಡಿಸುವೆ
ಖಾಲಿ ಗೋಡೆಗಳ ತುಂಬಾ…

ಮಣ್ಣು ತನ್ನೊಳಗನ್ನು ಹೇಳಿತು!
ನೀರು ತೇವ ನೀಡಿತು!
ಕುಂಚ ಗೀಚುತ್ತ ಸಾಗಿತು!
ಬಣ್ಣ ಜೀವ ತುಂಬಿತು!
ಚಿತ್ರಗಳೆಲ್ಲ ಮಾತಿಗೆ ಶುರುವಿಟ್ಟವು!

ತಾವು ಇಂಗಿಸಿಕೊಂಡ ನೋವ ಹಿಂಡಿ
ಶೇಡಿ ಬಡಿದ ಗೋಡೆಯ ತುಂಬಾ
ಅದುಮಿಟ್ಟ ಘಟನೆಗಳ ಬಿಡಿಸುತ್ತ
ಚೌಕಟ್ಟುಗಳ ಕಳಚಿಟ್ಟವು!

ಚೂಪಾದ, ಸಪೂರಾದ, ಸಪಾಟಾದ, ಅಷ್ಟೇ ದಪ್ಪನಾದ ಕುಂಚಗಳ ಚಳಕವಲ್ಲವಿದು
ತಾಜಾ ನೆನಪು ಮತ್ತು ನೋವಿನೊಳಗದ್ದಿ ತೆಗೆದ ಮಾಗಿದ ಫಲವಿದು!

ಇಷ್ಟು ಸಾಕು ತಕ್ಷಣ ಉಸಿರು ಆರದಿರಲು!

‍ಲೇಖಕರು avadhi

20 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading